ಬಸ್ ನೌಕರನ ಸ್ಕೂಟರ್ ಕಳವು

ಬದಿಯಡ್ಕ: ಬಸ್ ನೌಕರ ರೊಬ್ಬರ ಸ್ಕೂಟರ್ ಕಳವಿಗೀಡಾದ ಘಟನೆ ನಡೆದಿದೆ. ಬೆಳ್ಳಿಗೆ ಬಳಿಯ ವಳಕಲ ಎಂಬಲ್ಲಿನ ವಿಜಿತ್ ವಿ ಎಂಬವರ ಸ್ಕೂಟರ್ ಕಳವಿಗೀಡಾ ಗಿದೆ. ಈ ತಿಂಗಳ ೧೭ರಂದು ರಾತ್ರಿ ೮.೩೦ರಿಂದ ೧೮ರಂದು ಬೆಳಿಗ್ಗೆ ೬ ಗಂಟೆ ಮಧ್ಯೆ ಸ್ಕೂಟರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಮನೆ ಸಮೀಪದ ರಸ್ತೆ ಬದಿ ಸ್ಕೂಟರ್ ನಿಲ್ಲಿಸಲಾಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆಂದು  ದೂರಲಾಗಿದೆ. ಈ ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಜಿತ್‌ರ ಮನೆ ಸಮೀಪದ ಸಿಸಿ ಕ್ಯಾಮರಾವನ್ನು  ಪೊಲೀಸರು ಪರಿಶೀ ಲಿಸಿದ್ದು, ಅದರಲ್ಲಿ ವ್ಯಕ್ತಿಯೋರ್ವರ ಸ್ಕೂಟರ್ ಕೊಂಡೊಯ್ಯುವ ದೃಶ್ಯ ಪತ್ತೆಯಾಗಿ ದೆಯೆಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page