ಮನೆ ಬಿಟ್ಟ ಮೂವರು ಬಾಲಕರನ್ನು ಪತ್ತೆಹಚ್ಚಿ ಹೆತ್ತವರಿಗೆ ಹಸ್ತಾಂತರಿಸಿದ ರೈಲ್ವೇ ಪೊಲೀಸರು

ಕಾಸರಗೋಡು: ಮನೆ ಬಿಟ್ಟ ಮೂವರು ಬಾಲಕರನ್ನು ರೈಲ್ವೇ ಪೊಲೀಸರು ಕಾಸರಗೋಡು ರೈಲು ನಿಲ್ದಾಣದಿಂದ ಪತ್ತೆಹಚ್ಚಿ ಹೆತ್ತವರಿಗೆ ಒಪ್ಪಿಸಿದ್ದಾರೆ.

ಕಣ್ಣೂರು ಜಿಲ್ಲೆಯ ಚೊಕ್ಲಿ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕರಿಮಾಡ್ ನಿವಾಸಿಗಳಾದ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಮೂವರು ವಿದ್ಯಾರ್ಥಿಗಳು ನಿನ್ನೆ ಮಧ್ಯಾಹ್ನ ಕಣ್ಣೂರು ರೈಲು ನಿಲ್ದಾಣದಿಂದ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೇರಿದ್ದಾರೆ.

ರೈಲು ರಾತ್ರಿ 7 ಗಂಟೆಗೆ ಕಾಸರಗೋಡು ನಿಲ್ದಾಣಕ್ಕೆ ತಲುಪಿದಾಗ ಅದರೊಳ ಗಿದ್ದ ಮೂವರು ವಿದ್ಯಾರ್ಥಿಗಳನ್ನು ಕಂಡು ಶಂಕೆಗೊಂಡ ರೈಲ್ವೇ ಪೊಲೀಸರು ಅವರನ್ನು ವಶಕ್ಕೆ ತೆಗೆದು  ವಿಚಾರಿಸಿದಾಗ ಅವರು ಊರು ಬಿಟ್ಟು ಬಂದಿರುವುದಾಗಿ  ಸ್ಪಷ್ಟಗೊಂಡಿದೆ. ಪೊಲೀಸರು ತಕ್ಷಣ ವಿದ್ಯಾರ್ಥಿಗಳ ಮನೆಯವರನ್ನು ಸಂಪರ್ಕಿಸಿ  ಮಾಹಿತಿ ನೀಡಿದ್ದಾರೆ. ಅದರಂತೆ ಹೆತ್ತವರು ಕಾಸರಗೋಡಿಗೆ ಆಗಮಿಸಿ  ಬಾಲಕರನ್ನು ಪೊಲೀಸರು ಅವರ ಜತೆ ಕಳುಹಿಸಿಕೊಟ್ಟರು.

Leave a Reply

Your email address will not be published. Required fields are marked *

You cannot copy content of this page