ಮಳೆ: ರಾಜ್ಯದಲ್ಲಿ ನಿನ್ನೆ ಮಾತ್ರವಾಗಿ 7 ಸಾವು: 10 ಬೆಸ್ತರು ನಾಪತ್ತೆ

ಕಾಸರಗೋಡು: ರಾಜ್ಯದಲ್ಲಿ ಜಡಿಮಳೆ ಸುರಿಯುವಿಕೆ ನಿರಂತ ರವಾಗಿ ಮುಂದುವರಿಯುತ್ತಿದ್ದು, ಮುಂದಿನ ೫ ದಿನಗಳ ತನಕ ಮಳೆ ಇದೇ ರೀತಿ ಮುಂದುವರಿಯಲಿದೆ ಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲ ಕಾಸರಗೋಡು ಸೇರಿದಂತೆ ಮೂರು ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್, ಉಳಿದ 11 ಜಿಲ್ಲೆಗಳಲ್ಲ್ಲಿ ಆರೆಂಜ್ ಎಲರ್ಟ್ ಘೋಷಿಸಲಾಗಿದೆ. ಧಾರಾಕಾರ ಮಳೆ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ  ಪ್ರವಾಹ ಸದೃಶ ಪ್ರತೀತಿ ಸೃಷ್ಟಿಸಿದೆ. ಪ್ರಾಕೃತಿಕ ವಿಕೋಪಕ್ಕೆ  ಮಧೂರು ಪಟ್ಲದಲ್ಲಿ ಓರ್ವ ಯುವಕ ಸೇರಿದಂತೆ ನಿನ್ನೆ ಮಾತ್ರವಾಗಿ 7 ಮಂದಿ ಸಾವನ್ನಪ್ಪಿದ್ದಾರೆ.  ವಿಳಿಂಞದಲ್ಲಿ ಆಂಟನಿ ಥೋಮಸ್ (52) ದೋಣಿ ಮಗುಚಿ ಬಿದ್ದು ಸಾವನ್ನಪ್ಪಿದ್ದಾರೆ. ಇದೇ ರೀತಿ ಕೋಟ್ಟಯಂನ ಪಣಚ್ಚಿಕ್ಕಾಡ್‌ನಲ್ಲಿ ದೋಣಿ ಮಗುಚಿ ವಿ.ಕೆ. ಜೋಬಿ (36) ಮತ್ತು ಅರುಣ್ ಸ್ಯಾಮ್  (32) ಸಾವನ್ನಪ್ಪಿದ್ದಾರೆ. ಆಲಪ್ಪುಳದಲ್ಲಿ ಜಡಿಮಳೆಗೆ ಮನೆಗೆ ನೀರು ನುಗ್ಗಿ ಅನಿರುದ್ಧನ್ (70) ಎಂಬವರು ಸಾವನ್ನಪ್ಪಿದ ಸ್ಥಿತಿಯಲ್ಲಿ  ಪತ್ತೆಯಾಗಿ ದ್ದಾರೆ.  ಎರ್ನಾಕುಳಂನಲ್ಲಿ ಉದ್ಯೋಗ ಖಾತರಿ ಯೋಜನೆ ಕಾರ್ಮಿಕೆ ಅನ್ನಕುಟ್ಟಿ (85) ಎಂಬವರ ದೇಹದ ಮೇಲೆ ಮರಬಿದ್ದು ಅಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ತಿರುವನಂತಪುರ ಜಿಲ್ಲೆಯ ವಿಳಿಂಞಂನಲ್ಲಿ ಮೂರು ಬೋಟುಗಳ ಲ್ಲಾಗಿ ಮೀನುಗಾರಿಕೆ ಸಮುದ್ರಕ್ಕೆ ತೆರಳಿದ 9 ಮಂದಿ ಬೆಸ್ತರು ಬಳಿಕ ಹಿಂತಿರುಗದೆ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಕರಾವಳಿ ಪೊಲೀಸರು ಮತ್ತು ಕೋಸ್ಟ್ ಗಾರ್ಡ್ ಸಮುದ್ರದಾ ದ್ಯಂತ ವ್ಯಾಪಕ ಶೋಧ ಆರಂಭಿಸಿದೆ.

 ಜಡಿಮಳೆ  ರಾಜ್ಯದ ಹೆಚ್ಚಿನ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಹದ ಪ್ರತೀತಿ ಸೃಷ್ಟಿಸಿದೆ. ಹೆಚ್ಚಿನ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ನಿನ್ನೆ 24 ತಾಸುಗಳಲ್ಲಾಗಿ 247 ಮಿಲ್ಲಿಮೀಟರ್ ಮಳೆ ಸುರಿದಿದೆ.

ಕಾಸರಗೋಡು, ಮಂಜೇಶ್ವರ ಮತ್ತು ಹೊಸದುರ್ಗ ತಾಲೂಕುಗಳ ಲ್ಲಾಗಿ ಮನೆಗೆ ನೆರೆಯಿಂದಾಗಿ 326 ಮಂದಿ ಯನ್ನು ಅಲ್ಲಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಮಂಜೇಶ್ವರದಲ್ಲಿ 286, ಕಾಸರಗೋಡು ೨೮ ಮತ್ತು ಹೊಸದುರ್ಗ ತಾಲೂಕಿನ 12 ಮಂದಿಯನ್ನು ನೆರೆಹಾವಳಿಯ ಹಿನ್ನೆಲೆಯಲ್ಲಿ ಅಲ್ಲಿಂದ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿದೆ.  ಇದರಲ್ಲಿ ಅಗ್ನಿಶಾಮಕದಳ ಪ್ರಧಾನ ಪಾತ್ರ ವಹಿಸುತ್ತಿದೆ. ಜಡಿ ಮಳೆ ರಾಜ್ಯದಲ್ಲಿ ಇನ್ನೂ 5 ದಿನಗಳ ತನಕ ಮುಂದುವರಿಯಲಿದೆಯೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ  ಜಿಲ್ಲೆಯಾದ್ಯಂತ ಜಾಗ್ರತಾ ನಿರ್ದೇಶ ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page