ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ವಿಗ್ರಹ ಅಯೋಧ್ಯೆಯಲ್ಲಿ  ಪ್ರತಿಷ್ಠೆ

ಅಯೋಧ್ಯೆ: ಇಲ್ಲಿನ ಶ್ರೀರಾಮ ಕ್ಷೇತ್ರದಲ್ಲಿ  ಈ ತಿಂಗಳ  ೨೨ರಂದು ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀರಾಮ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್  ನಿರ್ಮಿಸಿದ್ದಾರೆ. ಇವರು ಕೆತ್ತಿದ ಬಾಲರಾಮನ ವಿಗ್ರಹವನ್ನು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಿದೆ. ಇವರು ಇದುವರೆಗೆ ಕೆತ್ತಿದ ಮೂರನೇ ಅದ್ಭುತ ಶಿಲ್ಪ ಇದಾಗಲಿದೆ. ಈ ಮೊದಲು ಹೊಸದಿಲ್ಲಿಯ ಇಂಡ್ಯ ಗೇಟ್‌ನಲ್ಲಿ ಸ್ಥಾಪಿಸಿದ ನೇತಾಜಿ ಸುಭಾಷ್‌ಚಂದ್ರ ಬೋಸ್, ಕೇದಾರನಾಥದಲ್ಲಿರುವ ಶ್ರೀ ಶಂಕರಾಚಾರ್ಯರ ಪ್ರತಿಮೆಯನ್ನು ಇವರು ಕೆತ್ತಿದ್ದಾರೆ. ಶ್ರೀರಾಮನ ವಿಗ್ರಹವನ್ನು ಕೆತ್ತಲು ಇವರು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಲ್ಲನ್ನು ಬಳಸಿದ್ದಾರೆನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page