ಯುವಕ ನಾಪತ್ತೆ

ಉಪ್ಪಳ: ಯುವಕನೋರ್ವ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೊಸಬೆಟ್ಟು ಪಾಂಡ್ಯಾಲ ಜುಮಾ ಮಸೀದಿ ರಸ್ತೆ ನಿವಾಸಿ ರಂಶಾದ್ (28) ನಾಪತ್ತೆಯಾದ ವ್ಯಕ್ತಿ. ಈ ತಿಂಗಳ 18ರಂದು ಸಂಜೆ 7 ಗಂಟೆಗೆ ಇವರು ಮನೆಯಿಂದ ಸ್ಕೂಟರ್‌ನಲ್ಲಿ ತೆರಳಿದ್ದರು. ಅನಂತರ ಮರಳಿ ಮನೆಗೆ ತಲುಪಿಲ್ಲವೆನ್ನಲಾಗಿದೆ.  ಈ ಬಗ್ಗೆ ತಂದೆ ಕೆ.ಎಂ.ಕೆ. ಅಬ್ದುಲ್ ರಹಿಮಾನ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ

Leave a Reply

Your email address will not be published. Required fields are marked *

You cannot copy content of this page