ತಿರುವನಂತಪುರ: ರಾಜ್ಯ ಶಾಲಾ ಪ್ರವೇಶೋತ್ಸವ ಜೂನ್ 2ರಂದು ಬೆಳಿಗ್ಗೆ 9.30ಕ್ಕೆ ಕವಲೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಇದರ ಅಂಗವಾಗಿ ಅಂದು ಬೆಳಿಗ್ಗೆ 8.30 ರಿಂದ ವಿದ್ಯಾರ್ಥಿಗಳಿಂದ ವಿವಿಧ ಕಲಾ ಕಾರ್ಯಕ್ರಮಗಳಿರುವುದು. 3೦೦೦ ಮಂದಿಗೆ ಭೋಜನವನ್ನು ಏರ್ಪಡಿಸಲಾಗುವುದೆಂದು ಸಂಘಾಟಕರು ತಿಳಿಸಿದ್ದಾರೆ.