ರಾಷ್ಟ್ರೀಯ ಹೆದ್ದಾರಿ: ಕುಂಬಳೆ ಸೇತುವೆ ವಾಹನ ಸಂಚಾರಕ್ಕೆ ಮುಕ್ತ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಮೊದಲ ರೀಚ್‌ಆಗಿರುವ ತಲಪ್ಪಾಡಿ-ಚೆಂಗಳ  ರಸ್ತೆಯಲ್ಲಿರುವ್ಲ ಕುಂಬಳೆ ಸೇತುವೆಯನ್ನು ಇಂದು ವಾಹನ ಸಂಚಾರಕ್ಕಾಗಿ ತೆರೆದುಕೊಡ ಲಾಯಿತು.  ಇದರಿಂದ ಎರಡೂ ಭಾಗಗಳಿಗೆ  ವಾಹನಗಳಿಗೆ ಸುಗಮವಾಗಿ   ಸಂಚರಿಸಲು ಸೌಕರ್ಯ ಉಂಟಾಗಿದೆ.  ಈ ಸೇತುವೆ ಸಮೀಪವಿರುವ  ಹಳೆ ಸೇತುವೆಯನ್ನು  ಮುರಿದು ತೆಗೆದು  ದ್ವಿಪಥ ರಸ್ತೆಗೆ  ಸೌಕರ್ಯವಾಗುವ ರೀತಿಯಲ್ಲಿ ಮತ್ತೊಂದು ಸೇತುವೆ ಯನ್ನು   ನಿರ್ಮಿಸಲು  ಆ ಮೂಲಕ  ದ ವಾಹನ ಸಂಚಾರಕ್ಕೆ ಹೊಸ ಸೇತುವೆ ಮೂಲಕ ನಡೆಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿಯ ತಲಪ್ಪಾಡಿ-ಚೆಂಗಳ ಒಂದನೇ ರೀಚ್ ನಲ್ಲಿ ಏಳು ಸೇತುವೆಗಳಿವೆ. ಮಂಜೇಶ್ವರ-ಹೊಸಬೆಟ್ಟು, ಮಂಜೇಶ್ವರ, ಮಂಜೇಶ್ವರ ಚೆಕ್‌ಪೋಸ್ಟ್, ಕುಕ್ಕಾರು, ಶಿರಿಯ, ಕುಂಬಳೆ, ಮೊಗ್ರಾಲ್ ಎಂಬಿಡೆಗಳಲ್ಲಾಗಿ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳ ನಿರ್ಮಾಣ ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ಹಲವುಕೊನೆಯ ಹಂತದಲ್ಲಿವೆ. ಈ ಭಾಗಗಳ  ಷಷ್ಪಥ  ಹೆದ್ದಾರಿಯು ಅಂತಿಮ ಹಂತಕ್ಕೆ ತಲುಪಿದೆ. ಪ್ರಧಾನ ಪೇಟೆಗಳಲ್ಲಿ ಇನ್ನು ಕಾಮಗಾರಿ ಪೂರ್ತಿಗೊಳ್ಳಲು ಬಾಕಿಯಿದೆ. ಕಾಸರಗೋಡಿನಲ್ಲಿ ಒಂದೂವರೆ ಕಿಲೋಮೀಟರ್‌ನಷ್ಟಿರುವ  ಫ್ಲೈ ಓವರ್ ನಿರ್ಮಾಣ ಅಂತಿಮ ಹಂತದಲ್ಲಿದೆ. ನಿರ್ಮಾಣ ಚಟುವಟಿಕೆ ತ್ವರಿತಗತಿಯಲ್ಲಿ ಆರಂಭಿಸಿರುವಾಗಲೇ ಸಾರಿಗೆ ಅಡಚಣೆ ತೀವ್ರಗೊಂಡಿರುವುದಾಗಿ ಆರೋಪಗಳು ಕೇಳಿಬಂದಿವೆ.

Leave a Reply

Your email address will not be published. Required fields are marked *

You cannot copy content of this page