ಹೊಡೆದಾಟ: ಇಬ್ಬರು ಆಟೋಚಾಲಕರಿಗೆ ಗಾಯ

ಮುಳ್ಳೇರಿಯ: ನೆಟ್ಟಣಿಗೆ ಜಂಕ್ಷನ್‌ನಲ್ಲಿ ನಿನ್ನೆ ಆಟೋ ಚಾಲಕರ ಮಧ್ಯೆ ಹೊಡೆದಾಟ ನಡೆದಿರುವುದಾಗಿ ದೂರಲಾಗಿದೆ.  ಹೊಡೆದಾಟದಲ್ಲಿ ನೂಂಜದ ಇಬ್ರಾಹಿಂ, ಕಲ್ಲಗದ ನವೀನ್ ಎಂಬಿವರು ಗಾಯಗೊಂಡಿದ್ದು, ಮುಳ್ಳೇರಿಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಬಾಡಿಗೆ ವಿಷಯಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದೆ ಎಂದು ದೂರಲಾಗಿದೆ. ಈ ಸಂಬಂಧ ಇಬ್ಬರ ವಿರುದ್ಧ ಆದೂರು ಪೊಲೀಸರಿಗೆ ದೂರು ನೀಡಲಾಗಿದೆ.

Leave a Reply

Your email address will not be published. Required fields are marked *

You cannot copy content of this page