೧೦೬ ಪ್ಯಾಕೆಟ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮದ ಪೆರಿಯಡ್ಕ ಜಂಕ್ಷನ್ನಲ್ಲಿ ರಸ್ತೆ ಬಳಿಯ ಮಜಲ್ನಲ್ಲಿ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟಿವ್ ಆಫೀಸರ್ ಜನಾರ್ದನನ್ ಕೆ.ಯು. ಅವರ ನೇತೃತ್ವದ ತಂಡ ನಿನ್ನೆ ನಡೆಸಿದ ದಾಳಿಯಲ್ಲಿ ಕರ್ನಾಟಕ ನಿರ್ಮಿತ ೧೮೦ ಎಂ.ಎಲ್ನ ೧೬೦ ಟೆಟ್ರಾ ಪ್ಯಾಕೆಟ್ ಮದ್ಯ (೧೯.೦೮ ಲೀಟರ್) ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಮೊಗ್ರಾಲ್ ಪುತ್ತೂರು ಮಜಲ್ ಶಿವಕೃಪಾ ವೀಟಿಲ್ನ ಅಶೋಕನ್ (೪೩) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಮೊಹಮ್ಮದ್ ಕಬೀರ್ ಬಿ.ಎಸ್, ಸಿವಿಲ್ ಎಕ್ಸೈಸ್ ಆಫೀಸರ್ಗಳಾದ ಎಂ.ಎಂ. ಪ್ರಸಾದ್, ಚಾರ್ಲ್ಸ್ ಜೋಸ್, ಅರುಣ್ ಆರ್.ಕೆ, ಚಾಲಕ ವಿಜಯನ್ ಪಿ.ಎಸ್ ಎಂಬವರು ಒಳಗೊಂಡಿದ್ದರು.