ಅಧ್ಯಾಪಕರು, ನೌಕರರಿಂದ ರೈಲ್ವೇ ಸ್ಟೇಷನ್ ಧರಣಿ
ಕಾಸರಗೋಡು: ಕೇರಳದ ರೈಲು ಪ್ರಯಾಣ ಸಂಕಷ್ಟವನ್ನು ಪರಿಹರಿಸಬೇಕು, ಕೇಂದ್ರ ಕೇರಳದೊಂದಿಗೆ ತೋರುವ ಅವಗಣನೆ ಕೊನೆಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಅಧ್ಯಾಪಕರು ಹಾಗೂ ನೌಕರರು ಧರಣಿ ನಡೆಸಿದರು. ಅಗತ್ಯದ ರೈಲುಗಾಡಿಗಳನ್ನು ಮಂಜೂರು ಮಾಡಬೇಕು, ಈಗ ಇರುವ ರೈಲುಗಾಡಿಗಳಲ್ಲಿ ಇನ್ನಷ್ಟು ಹೆಚ್ಚು ಜನರಲ್ ಕೋಚ್ ಮಂಜೂರು ಮಾಡ ಬೇಕು, ಸೀಸನ್ ಟಿಕೆಟ್ ಪ್ರಯಾಣಿಕರ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬೀ ಬೇಡಿಕೆಗಳನ್ನು ಆಗ್ರಹಿಸಿ ಸಮಗ್ರ ಸಹಿ ಸಂಗ್ರಹ ಸಹಿತದ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದು ಅವರು ಈ ವೇಳೆ ತಿಳಿಸಿದರು.
ಕಾಸರಗೋಡು ರೈಲು ನಿಲ್ದಾಣ ಪರಿಸರದಲ್ಲಿ ನಡೆದ ಧರಣಿಯನ್ನು ಎನ್ಎಫ್ಪಿಇ ಮಾಜಿ ಅಖಿಲ ಭಾರತ ಅಧ್ಯಕ್ಷ ಪಿ.ವಿ. ರಾಜೇಂದ್ರನ್ ಉದ್ಘಾಟಿ ಸಿದರು. ಜಿಲ್ಲಾಧ್ಯಕ್ಷ ಕೆ. ಭಾನುಪ್ರಕಾಶ್ ಅಧ್ಯಕ್ಷತೆ ವಹಿಸಿದರು. ಕೆಎಸ್ಟಿಎ ರಾಜ್ಯ ಕಾರ್ಯದರ್ಶಿ ಕೆ. ರಾಘವನ್, ವಿ. ಚಂದ್ರನ್, ವಿ. ಶೋಭ, ಟಿ. ದಾಮೋದರನ್, ಟಿ. ಪ್ರಕಾಶನ್, ಬಾಬು, ರಾಜೀವನ್ ಉದಿನೂರು ಮಾತನಾಡಿದರು. ಕೆ. ಹರಿದಾಸ್ ಸ್ವಾಗತಿಸಿ, ಕೆ.ವಿ. ರಾಘವನ್ ವಂದಿಸಿದರು.