ಅಬಕಾರಿ ಕಾರ್ಯಾಚರಣೆ: ಆಟೋರಿಕ್ಷಾ ಸಹಿತ ಇಬ್ಬರ ಸೆರೆ; ಓರ್ವ ಪರಾರಿ

ಕಾಸರಗೋಡು: ಜಿಲ್ಲೆಯಲ್ಲಿ ಅಬಕಾರಿ ತಂಡ ವ್ಯಾಪಕ ದಾಳಿ ಆರಂಭಿಸಿದ್ದು, ಇದರಂತೆ ನಡೆದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮದ್ಯ ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಆಟೋರಿಕ್ಷಾವನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜನಾರ್ದನನ್ ಕೆ.ವಿ.ರ ನೇತೃತ್ವದ ತಂಡ ಕಾಸರಗೋಡು ನುಳ್ಳಿಪ್ಪಾಡಿಯಲ್ಲಿ ನಡೆಸಿದ ಕಾರ್ಯಾ ಚರಣೆಯಲ್ಲಿ ಆಟೋರಿಕ್ಷಾವೊಂದರಲ್ಲಿ ಸಾಗಿಸಲಾಗುತ್ತಿದ್ದ ೫೧.೮೪ ಲೀಟರ್ (180 ಎಂ.ಎಲ್.ನ 288 ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ರಿಕ್ಷಾದ ಸಹಿತ ಅದನ್ನು ವಶಕ್ಕೆ ತೆಗೆದುಕೊಂಡಿದೆ.

ಇದಕ್ಕೆ ಸಂಬಂಧಿಸಿ ಕುಂಬಳೆಗೆ ಸಮೀಪದ ಎಡನಾಡು ಸೂರಂಬೈಲು ನಿವಾಸಿ ವಿನೀತ್ ಕುಮಾರ್ ಎಚ್ (27) ಎಂಬಾತನನ್ನು ಬಂಧಿಸಲಾಗಿದೆ. ಆ ವೇಳೆ ಆತನ ಜತೆಗಿದ್ದ ನಾರಾಯಣನ್ ಎಂ. ಎಂಬಾತ ಪರಾರಿಯಾಗಿದ್ದಾನೆ. ಈ ಬಗ್ಗೆ ಈ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ಅರುಣ್ ಆರ್.ಕೆ, ನಸ್ರುದ್ದೀನ್ ಎ, ಪ್ರಿವೆಂಟಿವ್ ಆಫೀಸರ್ (ಗ್ರೇಡ್) ಪ್ರಸಾದ್ ಎಂ.ಎಂ. ಎಂಬವರು ಒಳಗೊಂಡಿದ್ದರು.

ಇದೇ ರೀತಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಜೋಸೆಫ್ ಜೆ. ಎ.ಎಂ. ನೇತೃತ್ವದ ತಂಡ ಕಾಸರಗೋಡು ನೆಲ್ಕಳ ನಗರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 180 ಎಂ.ಎಲ್‌ನ 48 ಪ್ಯಾಕೆಟ್ (8.64 ಲೀಟರ್) ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನೆಲ್ಕಳ ನಗರದ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಗಣಪತಿ ಅಲಿಯಾಸ್ ಅಜೇಶ್ ಸಿ. (25) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿಇಒಗಳಾದ ಬಾಬು ವಿ, ರಾಜೇಶ್ ಪಿ, ಸಚಿತ್ ಕುಮಾರ್, ಕೆ. ಶ್ಯಾಮ್‌ಜಿತ್, ಚಾಲಕ ಸುಮೋದ್ ಎಂ.ವಿ ಎಂಬವರು ಒಳಗೊಂಡಿದ್ದರು.

ಇನ್ನೊಂದೆಡೆ ಹೊಸದುರ್ಗ ಪುಲ್ಲೂರು ತೂಚುಪ್ಪನಂನ ಹಿತ್ತಿಲೊಂದರ ಪೊದೆಯಲ್ಲಿ ಬಚ್ಚಿಡಲಾಗಿದ್ದ 180 ಎಂ.ಎಲ್‌ನ 450 ಪ್ಯಾಕೆಟ್ (81 ಲೀಟರ್) ಕರ್ನಾಟಕ ನಿರ್ಮಿತ ಮದ್ಯ ಮತ್ತು 180 ಎಂ.ಎಲ್‌ನ 192 ಗೋವಾ ಮದ್ಯ (34.56 ಲೀಟರ್)ವನ್ನು ಹೊಸದುರ್ಗ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ವಿ. ಸುನೀಶ್ ಮೋನ್‌ರ ನೇತೃತ್ವದ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

Leave a Reply

Your email address will not be published. Required fields are marked *

You cannot copy content of this page