ಆಟೋರಿಕ್ಷಾ ಚಾಲಕರ ಸಂಘಟನೆಯಿಂದ ರಕ್ತದಾನ ಶಿಬಿರ

ಮಂಜೇಶ್ವರ: ಆಟೋ ರಿಕ್ಷಾ ಚಾಲಕರ ಸಂಘಟನೆಯಾದ ಎಸ್ ಟಿ ಯು ಉದ್ಯಾವರ ಯೂನಿಟ್ ಹಾಗೂ ಯೇನಪೋಯ ಮೆಡಿಕಲ್ ಕಾಲೇಜು ಜಂಟಿ ಆಶ್ರಯದಲ್ಲಿ ಉದ್ಯಾವರ ಯೂನಿಟ್ ಆಟೋ ರಿಕ್ಷಾ ನಿಲ್ದಾಣದ ಪರಿಸರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಇಲ್ಲಿಯ ಆಟೋ ರಿಕ್ಷಾ ಚಾಲಕರು ಆಟೋ ಡ್ರೈವರ್ಸ್ ಹೆಲ್ಪಿಂಗ್ ಚ್ಯಾರಿಟಿ ಎಂಬ ಸಂಘಟನೆಯನ್ನು ರೂಪೀಕರಿಸಿ ಬಡ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ ತಮ್ಮಿಂದಾಗುವ ರೀತಿಯ ಸಹಾಯಗಳನ್ನು ಒದಗಿಸಿ ಹಲವು ರೀತಿಯ ಸಮಾಜಮುಖಿ ಸೇವೆಗಳನ್ನು ನೀಡಿ ಗಮನ ಸೆಳೆದಿದ್ದಾರೆ.
ಸಂಘಟನೆಯ ಅಧ್ಯಕ್ಷ ಆಫ್ತಾಬ್ ತಂಙಳ್‌ರÀ ಅಧ್ಯಕ್ಷತೆಯಲ್ಲಿ ನಡೆದ ರಕ್ತದಾನ ಶಿಬಿರವನ್ನು ಶಾಸಕ ಎ. ಕೆ.ಎಂ ಅಶ್ರಫ್ ಉದ್ಘಾಟಿಸಿದರು.
ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಸಮಿತಿ ಕೋಶಾಧಿಕಾರಿ ಅಸಯ್ಯದ್ ಸೈಫುಲ್ಲ ತಂಙಳ್, ಮುಸ್ತಫ ಉದ್ಯಾವರ, ಹನೀಫ್ ಕುಂಜತ್ತೂರು, ಇರ್ಫಾನ್, ಮೊಯಿದೀನ್ ಹೊಸಂ ಗಡಿ, ಗಾಯತ್ರಿ, ಪ್ರಿಯಾಂಕ ಶುಭ ಕೋರಿದರು. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡ ಆಟೋ ರಿಕ್ಷಾ ಚಾಲಕರಿಗೆ ಶಾಸಕರು ಸಮವಸ್ತ್ರವನ್ನು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ದರು. ನಾಸಿರ್ ಶಾಫಿ, ಅಬ್ಬಾಸ್, ಸಲೀಂ ಮೊದಲಾದವರು ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page