ಆಟೋ ರಿಕ್ಷಾ ಢಿಕ್ಕಿ ಹೊಡೆದು ಚಿಕಿತ್ಸೆಯಲ್ಲಿದ್ದ ಯುವತಿ ಸಾವು

ಕಾಸರಗೋಡು: ಆಟೋ ರಿಕ್ಷಾ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿ ದ್ದಾರೆ. ಪಳ್ಳಿಕ್ಕರೆ ಪೂಚಕ್ಕಾಡಿನ ತೋಟತ್ತಿಲ್ ಮೊಹಮ್ಮದ್ ಅಶ್ರಫ್ ಅಲಿಯಾಸ್ ಗುಜರಾತಿ ಅಶ್ರಫ್ (48) ಸಾವನ್ನಪ್ಪಿದ ವ್ಯಕ್ತಿ. ಈ ತಿಂಗಳ 3ರಂದು ಪಾಲಕುನ್ನಿನಲ್ಲಿ ಮೊಹಮ್ಮದ್ ಅಶ್ರಫ್‌ರಿಗೆ ಆಟೋ ರಿಕ್ಷಾ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಸಂಶುದ್ದೀನ್ (ಗುಜ ರಾತ್ ನಿವಾಸಿ)-ಆಬಿದಾ  ದಂಪತಿಯ ಪುತ್ರನಾಗಿರುವ ಮೃತ ಮೊಹಮ್ಮದ್ ಅಶ್ರಫ್ ಪತ್ನಿ ರಸಿಯಾ, ಮಕ್ಕಳಾದ  ಆಯಿಶತ್ ಶಬ್ನ, ಅಫ್ತಾಬ್, ಸಲಾಹುದ್ದೀನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page