ಆರಿಕ್ಕಾಡಿ ಪಾರೆ ಶ್ರೀ ಭಗವತೀ ಆಲಿ ಚಾಮುಂಡಿ ಕ್ಷೇತ್ರ: ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಆರಂಭ

ಕುಂಬಳೆ: ಆರಿಕ್ಕಾಡಿ ಪಾರೆಸ್ಥಾನ ಪಾರೆ ಶ್ರೀ  ಭಗವತಿ ಆಲಿಚಾಮುಂಡಿ ಕ್ಷೇತ್ರದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ  ಕಾರ್ಯಕ್ರಮ ಇಂದು ಬೆಳಿಗ್ಗೆ ಉಗ್ರಾಣ ಮುಹೂ ರ್ತದೊಂದಿಗೆ ಆರಂಭಗೊಂಡಿತು. ಸಂಜೆ ೫.೩೦ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಅನಂತರ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. ನಾಳೆ ಬೆಳಿಗ್ಗೆ ೭.೩೦ರಿಂದ ಅಂಕುರಪೂಜೆ, ಗೃಹಶಾಂತಿ, ಮೃತ್ಯುಂಜಯ ಹೋಮ, ೧೧ ರಿಂದ  ಪಾರೆಸ್ಥಾನ ಶ್ರೀ ಭಗವತೀ ಮಹಿಳಾ ಭಜನಾ ಸಂಘದವರಿಂದ ಭಜನೆ, ಮಧ್ಯಾಹ್ನ ೧೨.೩೦ಕ್ಕೆ ಅಂಕುರಪೂಜೆ, ಅಪರಾಹ್ನ ೩ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕುಮಾರ ಎಂ ಅಧ್ಯಕ್ಷತೆ ವಹಿಸು ವರು. ಬ್ರಹ್ಮಶ್ರೀ ಕಲ್ಕುಳಬೂಡು ಶಂಕರನಾರಾಯಣ ಕಡಮಣ್ಣಾಯ ಆಶೀರ್ವಚನ ನೀಡುವರು. ಹಲವರು ಗಣ್ಯರು ಉಪಸ್ಥಿತರಿರುವರು.

೨೦ರಂದು ಬೆಳಿಗ್ಗೆ ೭.೩೦ರಿಂದ ಅಂಕುರಪೂಜೆ, ೧೦೮ ಕಾಯಿ ಗಣಹೋಮ, ೧೧ರಿಂದ ಇಚ್ಲಂಪಾಡಿ ಶ್ರೀ ಭಗವತೀ ತೀಯಾ ಸಮಿತಿ ಆರಿಕ್ಕಾಡಿ ಇವರಿಂದ ಭಜನೆ, ಸಂಜೆ ೩ರಿಂದ ಧಾರ್ಮಿಕ ಸಭೆ ನಡೆ ಯಲಿದೆ.  ತೀಯಾ ಸಮಾಜ ಪಾರೆ ಸ್ಥಾನ ಇದರ ಅಧ್ಯಕ್ಷ ಕರುಣಾಕರ ಎಂ ಅಧ್ಯಕ್ಷತೆ ವಹಿಸುವರು. ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ, ಯೋಗೀಶ್  ಕಡಮಣ್ಣಾಯ ಆರಿಕ್ಕಾಡಿ ಸಹಿತ ಹಲವರು ಗಣ್ಯರು ಉಪಸ್ಥಿತರಿರುವರು. ೨೧ರಂದು ಬೆಳಿಗ್ಗೆ ೧೦.೩೦ಕ್ಕೆ  ಆರಿಕ್ಕಾಡಿ ಇಚ್ಲಂಪಾಡಿ ಊರ್ಯದ ಸಮಾಜ ಬಾಂಧವರ ವತಿಯಿಂದ  ನಿರ್ಮಿಸಿದ ಆನೆಚಪ್ಪರ ಕ್ಷೇತ್ರಕ್ಕೆ ಸಮರ್ಪಣೆ. ೨೨ರಂದು ಬೆಳಿಗ್ಗೆ ೯.೩೦ರಿಂದ  ಪಾರೆ ಶ್ರೀ ಐವರು ಭಗವತೀ, ಮಂತ್ರಮೂರ್ತಿ, ಕಾರ್ಯಕಾರನ್ (ಆಲಿ) ದೈವಗಳ ಪ್ರತಿಷ್ಠೆ, ಜೀವ ಕಲಶಾಭಿಷೇಕ, ತತ್ವಕಲಶಾಭಿಷೇಕ, ಬ್ರಹ್ಮಕಲಶಾ ಭಿಷೇಕ, ಶ್ರೀ ನಾಗದೇವರು ಮತ್ತು ಶ್ರೀ ಗುಳಿಗ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪ್ರತಿಷ್ಠಾಬಲಿ ನಡೆಯಲಿದೆ. ಪ್ರತಿದಿನ ೭.೩೦ಕ್ಕೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದೆ. ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಇರುವುದು. ಕ್ಷೇತ್ರದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವ ಮಾರ್ಚ್ ೩೦ರಿಂದ ಎಪ್ರಿಲ್೬ರ ವರೆಗೆ ನಡೆಯಲಿರುವುದು.

Leave a Reply

Your email address will not be published. Required fields are marked *

You cannot copy content of this page