ಇರಿತ: ನರಹತ್ಯಾ ಯತ್ನ ಪ್ರಕರಣ ದಾಖಲು
ದೇಲಂಪಾಡಿ: ದೇಲಂಪಾಡಿ ಕಣ್ಣಂಕೋಲ್ನಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ಕುಂಟಾರು ಉಯಿ ತ್ತಡ್ಕದ ಹಸೈನಾರ್ (೪೯)ರನ್ನು ಚಾಕುವಿನಿಂದ ಇರಿದು ಗಾಯಗೊಳಿ ಸಿದ ದೂರಿನಂತೆ ಆದೂರು ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿ ಕಣ್ಣಂಕೋಲ್ನ ಅಬ್ದುಲ್ ಹಮೀದ್ ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸ ಲಾಗಿದೆ. ಜಾಗೆ ಕುರಿತಾದ ದ್ವೇಷವೇ ಈ ಹಲ್ಲೆಗೆ ಕಾರಣವೆಂದು ಪೊಲೀಸರು ಹೇಳಿದ್ದಾರೆ.