ಉರ್ಮಿ ಸೇತುವೆ ಕಂ ವಿಸಿಬಿ ನಿರ್ಮಾಣಕ್ಕೆ ಮೊತ್ತ ಮಂಜೂರು: ರಾಜ್ಯಸರಕಾರಕ್ಕೆ ಸಿಪಿಎಂ ಲೋಕಲ್ ಸಮಿತಿ  ಅಭಿನಂದನೆ

ಪೈವಳಿಕೆ: ಪೈವಳಿಕೆ ಪಂ. ವ್ಯಾಪ್ತಿಯ ಉರ್ಮಿಯಲ್ಲಿ ಸೇತುವೆ ಕಂ ವಿಸಿಬಿ ಪುನರ್ ನಿರ್ಮಿಸಲು ೧.೨೩ ಕೋಟಿ ರೂ. ಮಂಜೂರು ಮಾಡಿದ ರಾಜ್ಯ ಸರಕಾರಕ್ಕೆ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ, ಉರ್ಮಿ ಬ್ರಾಂಚ್ ಸಮಿತಿ ಅಭಿನಂದನೆ ಸಲ್ಲಿಸಿದೆ. ಈ ಸೇತುವೆ ಕುಸಿದು ಬಿದ್ದ ಕಾರಣ ಕುರುಡಪದವು, ಕೊಮ್ಮಂಗಳ, ಬಲ್ಲಂಗುಡೇಲು, ಕೊಳಚಪ್ಪು, ಬೋಳಂಗಳ ಮೊದಲಾದ ಪ್ರದೇಶಗಳ ನಾಗರಿಕರು, ಕೃಷಿಕರು ಸಂಕಷ್ಟಪಡುತ್ತಿದ್ದಾರೆ. ವಾಹನ ಸಂಚಾರಕ್ಕೂ ಸಮಸ್ಯೆ ಯಾಗಿದೆ. ವಿದ್ಯಾರ್ಥಿಗಳಿಗೆ ಶಾಲೆಗೆ ತಲುಪಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ  ಉರ್ಮಿ ಸಂಕ ಮತ್ತು ವಿಸಿಬಿ ಪುನರ್ ನಿರ್ಮಿಸಲು ಒತ್ತಾಯಿಸಿ ಮನವಿ ಸಲ್ಲಿಸಿತ್ತು ಎಂದು ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಚಂದ್ರನಾಯ್ಕ್ ಮಾನಿಪ್ಪಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page