ಎಣ್ಮಕಜೆಯಲ್ಲಿ ಬಿಜೆಪಿ ಸ್ನೇಹ ಯಾತ್ರೆ

ಪೆರ್ಲ: ಬಿಜೆಪಿ ನಡೆಸುವ ಸ್ನೇಹಯಾತ್ರೆಯಂಗವಾಗಿ ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯತ್ ಸಮಿತಿಯ ಆಶ್ರಯದಲ್ಲಿ ಉಕ್ಕಿನಡ್ಕ, ಮಣಿಯಂಪಾರೆ, ಇಡಿಯಡ್ಕ, ಚರ್ಚ್‌ಗೆ ಭೇಟಿ ನೀಡಿ ಕೇಕ್ ಕೊಟ್ಟು ಶುಭಕೋರಲಾಯಿತು. ಬಿಜೆಪಿ ರಾಜ್ಯ ಕ್ರಿಸ್ಮಸ್ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಬಿಜೆಪಿ ಕುಂಬಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಎಣ್ಮಕಜೆ ಸಮಿತಿ ಅಧ್ಯಕ್ಷ ಸುಮಿತ್ ರಾಜ್, ಬಿಜೆಪಿ ನಾಯಕರಾದ ಚಂದ್ರಕಾಂತ್ ಶೆಟ್ಟಿ, ಪುನೀತ್, ಗಣೇಶ್ ಪ್ರಸಾದ್ ಮುಣಿಯಂಪಾರೆ ಭಾಗವಹಿಸಿದ್ದರು.

You cannot copy contents of this page