ಕಂಚಿಕಟ್ಟೆ ಸೇತುವೆ ಮುಚ್ಚುಗಡೆ ಪ್ರತಿಭಟಿಸಿ ಯುಡಿಎಫ್‌ನಿಂದ ಕಲೆಕ್ಟ್ರೇಟ್ ಧರಣಿ

ಕಾಸರಗೋಡು: ಕುಂಬಳೆ ಪಂಚಾ ಯತ್‌ನ ಕಂಚಿಕಟ್ಟೆ ಸೇತುವೆಯನ್ನು ಮುಚ್ಚುಗಡೆಗೊಳಿಸಿ ಆ ಮೂಲಕ ಸಂಚರಿಸುವವರಿಗೆ ಸಮಸ್ಯೆ ಸೃಷ್ಟಿಸಿದ  ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಯುಡಿಎಫ್ ಕುಂಬಳೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕಲೆಕ್ಟರೇಟ್ ಧರಣಿ  ನಡೆಸಲಾಯಿತು.  ಸೇತುವೆ ಮೂಲಕ  ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸೌಕರ್ಯವೊದಗಿಸಬೇಕು, ನಿರ್ಧಿಷ್ಟ ವಿಸಿಬಿ ಕಂ ಬ್ರಿಡ್ಜ್ ನಿರ್ಮಾಣ ಆರಂಭಿಸಲಿರುವ ಕ್ರಮ ತ್ವರಿತಗೊಳಿ ಸಬೇಕು ಎಂಬೀ ಬೇಡಿಕೆಗಳನ್ನು ಮುಂದಿರಿಸಿಕೊಂಡು ಪ್ರತಿಭಟನೆ ನಡೆಸಲಾಯಿತು.

ಬಿಸಿರೋಡ್‌ನಿಂದ ಮೆರವಣಿಗೆ ಯಾಗಿ ತಲುಪಿದ ಪ್ರತಿಭಟನಾ ಕಾರರನ್ನು ಕಲೆಕ್ಟರೇಟ್ ಮುಂಭಾಗದಲ್ಲಿ ಪೊಲೀಸರು ತಡೆದರು. ಧರಣಿಯನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ದರು. ಯುಡಿಎಫ್ ಕುಂಬಳ ಪಂಚಾಯತ್ ಚೆಯರ್‌ಮೆನ್ ಬಿ.ಎನ್. ಮುಹಮ್ಮದಲಿ ಅಧ್ಯಕ್ಷತೆ ವಹಿಸಿದರು. ಕನ್ವೀನರ್ ರವಿ ಪೂಜಾರಿ ಸ್ವಾಗತಿಸಿದರು. ಯುಡಿಎಫ್ ಮಂಡಲ ಕನ್ವೀನರ್ ಮಂಜುನಾಥ ಆಳ್ವ, ಮುಸ್ಲಿಂ ಲೀಗ್ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರಿಫ್, ಕುಂಬಳೆ ಪಂ. ಅಧ್ಯಕ್ಷ ಯು.ಪಿ. ತಾಹಿರ, ಜಿಲ್ಲಾ ಪಂ. ಸದಸ್ಯೆ ಜಮೀಲ ಸಿದ್ದಿಕ್, ಬ್ಲೋಕ್ ಪಂ, ಸ್ಥಾಯೀ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಳೆ, ಪಂ. ಉಪಾಧ್ಯಕ್ಷ ನಾಸಿರ್ ಮೊಗ್ರಲ್, ಲಕ್ಷ್ಮಣ ಪ್ರಭು,  ಸಯ್ಯಿದ್ ಹಾದಿ ತಂಙಳ್ ಮೊಗ್ರಾಲ್, ಗ್ರಾಮ ಪಂ. ಸದಸ್ಯರಾದ ರಹ್ಮಾನ್ ಆರಿಕ್ಕಾಡಿ, ಯೂಸುಫ್ ಉಳುವಾರು, ಅಸೀಸ್ ಕಳತ್ತೂರು, ಎಂ.ಪಿ. ಖಾಲಿದ್, ಸಿದ್ದಿಕ್ ದಂಡೆಗೋಳಿ,  ಅಶ್ರಫ್ ಕೊಡ್ಯಮ್ಮೆ, ಅಬ್ಬಾಸ್ ಕೊಡ್ಯಮ್ಮೆ, ಮುಹಮ್ಮದ್ ಕುಂಞಿ ಆರಿಕ್ಕಾಡಿ, ಎ. ಮೊಯ್ದೀನ್ ಕುಂಞಿ, ಅಬ್ದುಲ್ ರಹಿಮಾನ್ ರೇಡೋ, ಕೆ.ಎಂ. ಅಬ್ಬಾಸ್, ಐ. ಮುಹಮ್ಮದ್ ರಫೀಕ್, ಮೂಸ ಹಾಜಿ ಕೊಹಿನೂರು, ಲಕ್ಷ್ಮಣ ಕುಂಡಾಪು, ಆಯಿಶ ಹೈದರ್, ಅಬ್ಬಾಸ್ ಎಂ.ಬಿ., ಕೆ.ಬಿ ಅಬ್ದುಲ್ಲ, ಸಿದ್ದಿಕ್ ಉಜಾರ್, ನೌಫಲ್ ಕೊಡ್ಯಮ್ಮೆ, ಖಾಲಿದ್ ಕುಂಡಾಪು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page