ಕರ್ನಾಟಕ ನಿವಾಸಿ ಯುವಕ ಪೆರ್ಲಡ್ಕದಲ್ಲಿ  ನಿಗೂಢ ರೀತಿಯಲ್ಲಿ ಸಾವು

ಕಾಸರಗೋಡು: ಕರ್ನಾಟಕ ನಿವಾಸಿಯೋರ್ವ ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಪೆರ್ಲಡ್ಕ ಎಂಬಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕರ್ನಾಟಕದ ಗದಗ ಜಿಲ್ಲೆಯ ಸಹನಹಳ್ಳಿ ನಿವಾಸಿಯೂ ಕೊಳತ್ತೂರು ಚಾಪನಡ್ಕದಲ್ಲಿ ವಾಸಿಸುತ್ತಿದ್ದ ದೇವೇಂದ್ರಪ್ಪ ಚಿನ್ನಪ್ಪ ವಾಲಿಕಾರ (44) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಪೆರ್ಲಡ್ಕದಲ್ಲಿರುವ ಬಿವರೇಜಸ್ ಕಾರ್ಪೋರೇಶನ್‌ನ ಮದ್ಯದಂಗಡಿ ಸಮೀಪದ  ಕ್ವಾರ್ಟರ್ಸ್‌ವೊಂದರ ಮುಂಭಾಗದಲ್ಲಿ ಮೃತದೇಹ ಪತ್ತೆಯಾಗಿದೆ.  ಹಲವು ವರ್ಷಗಳಿಂದ ಚಾಪನಡ್ಕದಲ್ಲಿ ವಾಸಿಸುತ್ತಿದ್ದ ದೇವೇಂದ್ರಪ್ಪ ಯಂತ್ರ ಮೂಲಕ ಕಾಡು ಸವರುವ ಕೆಲಸ ನಡೆಸುತ್ತಿದ್ದರು. ಪತ್ನಿ ಹಾಗೂ ಮೂವರು ಮಕ್ಕಳು ಇವರ ಜೊತೆ ವಾಸಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಪತ್ನಿ ಹಾಗೂ ಮಕ್ಕಳು ಸುಹನಹಳ್ಳಿಯಲ್ಲಿರುವ ಸ್ವಂತ ಮನೆಗೆ  ತೆರಳಿದ್ದರು. ಇದರ ಬೆನ್ನಲ್ಲೇ ದೇವೇಂದ್ರಪ್ಪ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಪರಿಮಿತ ಮದ್ಯಪಾನದಿಂದ  ಪ್ರಜ್ಞೆತಪ್ಪಿ ಬಿದ್ದು ಅನಂತರ ಹೃದಯಾಘಾತವುಂಟಾಗಿ ಸಾವು ಸಂಭವಿಸಿರಬಹುದೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿ ದ್ದಾರೆ. ವಿಷಯ ತಿಳಿದು ಬೇಡಗಂ ಪೊಲೀಸರು ಸ್ಥಳಕ್ಕೆ ತಲುಪಿ   ಮಹಜ ರು ನಡೆಸಿದ ಬಳಿಕ ಮೃತದೇಹವನ್ನು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು.

Leave a Reply

Your email address will not be published. Required fields are marked *

You cannot copy content of this page