ಕಾಸರಗೋಡಿನ ಕಬಡ್ಡಿ ಹೆಮ್ಮೆ: ಕೊಡಕ್ಕಾಡ್ ಇ. ಭಾಸ್ಕರನ್‌ರಿಗೆ ದ್ರೋಣಾಚಾರ್ಯ ಪ್ರಶಸ್ತಿ

ಹೊಸದುರ್ಗ: ಕಾಸರಗೋಡು ಕಬಡ್ಡಿಗೆ ಹೆಮ್ಮೆ ತಂದ ಕೊಡಕ್ಕಾಡ್ ಭಾಸ್ಕರನ್‌ರಿಗೆ ದ್ರೋಣಾಚಾರ್ಯ ಪ್ರಶಸ್ತಿ ಗೌರವ. ಕೊಡಕ್ಕಾಡಿನ ಮಣ್ಣಿನಿಂದ ಕಬಡ್ಡಿಯ ಪಾಠವನ್ನು ಕಲಿತು ಭಾರತವನ್ನು ವಿಶ್ವದ ಅಗ್ರಸ್ಥಾನಕ್ಕೆ ಕೊಂಡೊಯ್ದ ಕಬಡ್ಡಿ ತರಬೇತುದಾರ ಇ ಭಾಸ್ಕರನ್‌ರಿಗೆ ಸಿಕ್ಕಿರುವ ಈ ಅಂತಾರಾಷ್ಟ್ರೀಯ ಪ್ರಶಸ್ತಿ ಅರ್ಹವಾದ ಮನ್ನಣೆಯಾಗಿದೆ. ಚೈನಾದಲ್ಲಿ ನಡೆದ ಹ್ಯಾಂಗ್ ಚೌ ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಇರಾನ್ ತಂಡವನ್ನು ಸೋಲಿಸಿ ಚಿನ್ನದ ಪದಕ ಗೆದ್ದ ಭಾರತ ತಂಡದ ಕೋಚ್ ಆಗಿದ್ದಾರೆ ಇ ಭಾಸ್ಕರನ್. ಕೊಡಕ್ಕಾಡ್ ವೆಳ್ಳಾಚಲದ ರೆಡ್ ಸ್ಟಾರ್ ತಂಡದಲ್ಲಿ ಆಡುವ ಮೂಲಕ ಭಾಸ್ಕರನ್ ಚಿಕ್ಕ ವಯಸ್ಸಿನಲ್ಲೇ ಕಬಡ್ಡಿಯಲ್ಲಿ ಸಕ್ರಿಯರಾದರು. ನಂತರ ಅವರು ಪಯ್ಯನ್ನೂರ್ ಕಾಲೇಜು ಮತ್ತು ಕಲ್ಲಿಕೋಟೆ ವಿಶ್ವವಿದ್ಯಾನಿಲಯಔ್ರಕಿ ಬೇಕಾಗಿ ಆಡಿದರು ಮತ್ತು ಭಾರತ ತಂಡವನ್ನು ಸೇರಿಕೊಂಡರು. 2009 ರಲ್ಲಿ ಮೊದಲ ಬಾರಿಗೆ ಭಾರತ ತಂಡದ ಕೋಚ್ ಆದರು. ಭಾಸ್ಕರ್ ನೇತೃತ್ವದ ಭಾರತ ಪುರುಷರ ತಂಡ 2010ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿತ್ತು. 2014ರಲ್ಲಿ ಭಾರತ ಮಹಿಳಾ ತಂಡವೂ ಚಿನ್ನ ಗೆದ್ದಿತ್ತು. 2014ರಿಂದ ಮುಂಬೈ ತಂಡದ ಕೋಚ್ ಆದರು. 2016 ರಿಂದ 2018 ರವರೆಗೆ ತಮಿಳು ತಲೈ ವರ್ಸ್ ತಂಡಕ್ಕೆ ತರಬೇತುದಾರರಾ ಗಿದ್ದರು. ಭಾಸ್ಕರ್ ನೇತೃತ್ವದ ಪುರುಷರ ತಂಡ ಕಳೆದ ಜೂನ್‌ನಲ್ಲಿ ಬುಸಾನ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿತ್ತು. ಇದೇ ವೇಳೆ ದೇಶದ ಕಬಡ್ಡಿ ಬೆಳವಣಿಗೆಯಲ್ಲಿ ಭಾಸ್ಕರ್ ಅವರ ಸಾದsನೆಯೂ ಇದೆ

Leave a Reply

Your email address will not be published. Required fields are marked *

You cannot copy content of this page