ಕಾಸರಗೋಡು ನ್ಯಾಯಾಲಯ ಸಹಿತ ವಿವಿಧೆಡೆ  ಕಳವುಯತ್ನ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ

ಕಾಸರಗೋಡು: ಕಳೆದ ಕೆಲವು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜನರನ್ನು ಆತಂಕಕ್ಕೀಡು ಮಾಡಿದ ಕುಖ್ಯಾತ ಕಳ್ಳನೋರ್ವ ಪೊಲೀಸರ ಕಸ್ಟಡಿಗೆ ಸಿಲುಕಿದ್ದಾನೆ. ಕಲ್ಲಿಕೋಟೆ ತೊಟ್ಟಿಲ್‌ಪಾಲಂ  ನಿವಾಸಿಯಾದ ಅನೀಶ್ ಜೋರ್ಜ್ ಯಾನೆ ಸನಲ್ (50) ಎಂಬಾತ   ಪೊಲೀಸ್‌ರ ಕಸ್ಟಡಿಯಲ್ಲಿದ್ದಾನೆ.  ಕಾಸರಗೋಡು ನ್ಯಾಯಾಲಯ ದಲ್ಲಿ ಇತ್ತೀಚೆಗೆ ನಡೆದ ಕಳವುಯತ್ನ  ಅದೇ ರೀತಿ ನಾಯಮ್ಮಾರಮೂಲೆ ಶಾಲೆಯಲ್ಲಿ ಕಳವು ಯತ್ನ, ಚೆಂಗಳ ನಾಲ್ಕನೇ ಮೈಲಿನ ಮರದ ಮಿಲ್‌ನಿಂದ 2.75 ಲಕ್ಷ ರೂಪಾಯಿ ಕಳವು, ನೀಲೇಶ್ವರ ಬಿವರೇಜಸ್ ಕಾರ್ಪರೇಶನ್‌ನಿಂದ ಕಳವುಗೈದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಒಂದೇ ಸ್ಥಳದಲ್ಲಿ ಖಾಯಂ ಆಗಿ ವಾಸಿಸದೆ ವಿವಿಧೆಡೆಗಳಲ್ಲಿ ಹಲವು ಹೆಸರುಗಳಲ್ಲಿ ಈತ ವಾಸಿಸಿ ಕಳವು ಕೃತ್ಯದಲ್ಲಿ  ನಿರತನಾಗುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತನ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ ಕೇಸುಗಳು ದಾಖಲಾಗಿವೆ. ಈತನನ್ನು ಕಾಸರಗೋಡಿಗೆ ತಲುಪಿಸಿ ತನಿಖೆಗೊ ಳಪಡಿಸಲು ನಿರ್ಧರಿಸಲಾಗಿದೆ.   ಕಾಸರಗೋಡು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆದ ಕಳವುಗಳ ಕುರಿತು  ಈತನಿಂದ ಮಾಹಿತಿ  ಲಭಿಸಲಿದೆಯೆಂದು ಪೊಲೀಸ್ ತಂಡ ನಿರೀಕ್ಷೆ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *

You cannot copy content of this page