ಕುಂಬಳೆಯಲ್ಲಿ ಮಂಗಗಳ ಉಪಟಳ: ಕೃಷಿಕರು ಸಂಕಷ್ಟದಲ್ಲಿ

ಕುಂಬಳೆ: ಕುಂಬಳೆಯಲ್ಲಿ ಮಂಗಗಳ ಉಪಟಳವೂ ತೀವ್ರಗೊಂಡಿದ್ದು, ಇದರಿಂದ ಕೃಷಿಕರು ಇನ್ನಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ.

ಕುಂಬಳ ದೇವಿನಗರದಲ್ಲಿ  ಕಳೆದ ಕೆಲವು ದಿನಗಳಿಂದ ಮಂಗಗಳ ಉಪಟಳ ತೀವ್ರಗೊಂಡಿದೆ. ಕುಂಬಳೆಯಲ್ಲಿ ವ್ಯಾಪಾರಿಯಾಗಿರುವ ದೇವಿನಗರದ  ಅಬ್ದುಲ್ ರಜಾಕ್‌ರ ತೋಟಕ್ಕೆ ನಿನ್ನೆ ನುಗ್ಗಿದ ಏಳರಷ್ಟು ಮಂಗಗಳು ಭಾರೀ ನಾಶನಷ್ಟ ಸೃಷ್ಟಿಸಿವೆ. ಮನೆ ಅಂಗಳದಲ್ಲಿದ್ದ ಹೂವಿನ ಗಿಡಗಳನ್ನು ಮುರಿದು ಹಾಕಿವೆ. ಅಲ್ಲದೆ ತೋಟದಲ್ಲಿ ತೆಂಗಿನಮರದಿಂದ ಸೀಯಾಳಗಳನ್ನು ನಾಶಗೊಳಿಸಿವೆ. ಅಲ್ಲದೆ ಪಪ್ಪಾಯಿ ಗಿಡಗಳನ್ನು ಮುರಿದುಹಾಕಿದ್ದು, ಚಿಕ್ಕಗಿಡಗಳಲ್ಲಿದ್ದ ಹಣ್ಣುಗಳನ್ನು ನಾಶಗೊಳಿಸಿವೆಯೆಂದು ದೂರಲಾಗಿದೆ. ಈಗಲೂ ಮಂಗಗಳು ಇದೇ ಪರಿಸರದಲ್ಲಿ ಬೀಡುಬಿಟ್ಟಿವೆ. ಕಾಡುಹಂದಿಯ ಉಪಟಳದಿಂದ ಈಗಾಗಲೇ ಕಂಗಾಲಾಗಿರುವ ಕೃಷಿಕರು ಇದೀಗ ಮಂಗಗಳ ಹಾವಳಿಯಿಂದ ಇನ್ನಷ್ಟು ಸಂಕಷ್ಟ ಸಮಸ್ಯೆಗೀಡಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page