ಕೊಂಡೆವೂರಿನಲ್ಲಿ ಲೋಕಕ್ಷೇಮಕ್ಕಾಗಿ ನವಗ್ರಹ ಯಾಗ, ಪ್ರತಿಷ್ಠೆ
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕ್ಷೇಮಕ್ಕಾಗಿ ಅತ್ಯಪೂರ್ವವಾದ ‘ನವಗ್ರಹ ಪ್ರತಿಷ್ಠೆ’ ಹಾಗೂ ‘ಅಷ್ಟೋತ್ತರ ಸಹಸ್ರ ನವಗ್ರಹ ಯಾಗ’ಗಳು ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆ ಯಿಂದ ವಿಜೃಂಭಣೆಯಿAದ ನಿನ್ನೆ ನಡೆಯಿತು. ಉಡುಪಿಯ ಅದಮಾರು ಮಠದ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿ, ಯಾಗದ ಮೂಲಕ ಇಡೀ ದೇಶಕ್ಕೆ ಸಂಪತ್ತು ತನ್ಮೂಲಕ ಸದ್ಭಾವನೆ ದೊರೆಯುತ್ತದೆ, ನಾವೆಲ್ಲರೂ ಕೂಡ ದೇಶದ ಏಳಿಗೆಯನ್ನು ಕೊಂಡೆವೂರು ಶ್ರೀಗಳಂತಹ ಯತಿಶ್ರೇಷ್ಠರ ಮಾರ್ಗದರ್ಶನದಲ್ಲಿ ಬಯಸೋಣ” ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಪ್ರಧಾನ ಆಚಾರ್ಯತ್ರಯ ರಲ್ಲಿ ಒಬ್ಬರಾದ ಬ್ರಹ್ಮಶ್ರೀ ಅನಂತ ಪದ್ಮನಾಭ ಆಸ್ರಣ್ಣರು “ಯಜ್ಞ ಕಾಮಧೇನು. ಇದರಿಂದಾಗಿ ವಾತಾವ ರಣದ ಓಝೋನ್ ಪದರ ಗಟ್ಟಿಯಾ ಗುತ್ತದೆ, ನಾವು ಅಲಭ್ಯ ಲಾಭವನ್ನು ಪಡೆಯುತ್ತೇವೆ, ಇನ್ನೊಬ್ಬರ ಏಳಿಗೆಯನ್ನೇ ಬಯಸುವ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಯವರು ಈ ಎಲ್ಲಾ ಚಟುವಟಿಕೆಗಳಿಗೆ ಕಾರಣಕರ್ತೃರಾಗಿ ದ್ದಾರೆ ಎಂದು ಹೇಳುತ್ತ ನಮಗೆಲ್ಲರಿಗೂ ಕೂಡ ನವಗ್ರಹರ ಆರಾಧನೆಯ ಮೂಲಕ ವಾಗಿ ಸನ್ಮಂಗಳವಾಗಲಿ” ಎಂದರು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಮತ್ತು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯಾಗ ಸಮಿತಿ ಅಧ್ಯಕ್ಷ ಕೆ. ನಾರಾಯಣ, ಗೌರವಾಧ್ಯಕ್ಷ, ಸದಾಶಿವ ಶೆಟ್ಟಿ ಕುಳೂರು, ಕನ್ಯಾನ, ರಮೇಶ್ ರಾಜು, ಬೆಂಗಳೂರು, ಡಾ. ಕೆ. ಸಿ. ರಾಮಮೂರ್ತಿ, ಬೆಂಗಳೂರು, ಕೆ ಕೆ ಶೆಟ್ಟಿ, ವಿಶ್ವನಾಥ್ ವೆಂಗರೆ, ಡಾ. ಮೋಹನ್ದಾಸ್ ಬೆಂಗಳೂರು, ಎಂ. ಪಿ ಉಮಾಶಂಕರ್, ಬೆಂಗಳೂರು,. ಎ.ಜೆ ಶೇಖರ್, ತೊಕ್ಕೊಟ್ಟು, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು. ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕೊಂಡೆವೂರು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪ್ರಮುಖರಾದ ದಿನಕರ್ ಹೊಸಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಪರಾಹ್ನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು. ಸೂರ್ಯಾಸ್ತ 6.39 ಕ್ಕೆ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಭಜನಾ ಸಪ್ತಾಹದ ದೀಪ ಪ್ರಜ್ವಲನೆ ನಂತರ ನಕ್ಷತ್ರವನದಲ್ಲಿ ದೀಪೋತ್ಸವ ನಡೆಯಿತು.