ಕೊಂಡೆವೂರು ಆಶ್ರಮದ ನಕ್ಷತ್ರ ವನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನವಗ್ರಹ ವಿಗ್ರಹಗಳ ಶೋಭಾಯಾತ್ರೆ

ಉಪ್ಪಳ: ಕೊಂಡೆವೂರು ಮಠ ಶ್ರೀ ನಿತ್ಯಾನಂದ ಯೋಗಾಶ್ರಮದ ನಕ್ಷತ್ರವನದಲ್ಲಿ ೨೪ರಂದು ಪ್ರತಿಷ್ಠಾಪನೆಗೊಳ್ಳಲಿರುವ  ನೂತನ ಶಿಲಾಮಯ ನವಗ್ರಹಗಳ ವಿಗ್ರಹದ ಮೆರವಣಿಗೆಯು ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ಕ್ಷೇತ್ರದಲ್ಲಿ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಆರಂಭಗೊಂಡು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ತಲುಪಿತು. ಅಲ್ಲಿಂದ ನಿನ್ನೆ ಬೆಳಿಗ್ಗೆ ವಾಹನಗಳ ಮೂಲಕ ಉಪ್ಪಳ ಪೇಟೆಗೆ ತಲುಪಿಸಿ ಉಪ್ಪಳ ಪೇಟೆಯಿಂದ ಚೆಂಡೆ, ಭಜನೆ ಹಾಗೂ ಪೂರ್ಣಕುಂಭ ಸ್ವಾಗತದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ತಲುಪಿತು. ಮಾರ್ಚ್ ೨೪ರಂದು ನಡೆಯುವ ಅಷ್ಟೋತ್ತರ ಸಹಸ್ರ ನವಗ್ರಹ ಯಾಗದಲ್ಲಿ ಉಪಯೋಗಿಸಲ್ಪಡುವ ನವಧಾನ್ಯ ಹಾಗೂ ಸವಿತ್ತುಗಳನ್ನು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮರ್ಪಿಸಿದರು. ಬಳಿಕ ಯಾಗದ ಪೂರ್ವಭಾವಿ ಕಾರ್ಯ ಕರ್ತರ ವಿಶೇಷ ಸಭೆ ಹಾಗೂ ವಿವಿಧ ವಿಭಾಗಗಳ ಜವಾಬ್ದಾರಿ ಘೋಷಣೆ ಮಾಡಲಾಯಿತು.

Leave a Reply

Your email address will not be published. Required fields are marked *

You cannot copy content of this page