ಕೊಬ್ಬರಿ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಲಕ್ಷಾಂತರ ರೂ.ಗಳ ನಷ್ಟ

ಮುಳಿಯಾರು: ಕೊಬ್ಬರಿ ಕಾರ್ಖಾನೆಗೆ ಆಕಸ್ಮಾತ್ ಆಗಿ ಬೆಂಕಿ ತಗಲಿ ಲಕ್ಷಾಂತರ ರೂ.ಗಳ ನಷ್ಟ ಉಂಟಾದ ಘಟನೆ ನಡೆದಿದೆ.

ಅರ್ಲಡ್ಕ ಕೋಪಾಳಕೊಚ್ಚಿಯ ಯೂಸುಫ್ ಕಳರಿ ಎಂಬವರ ಮಾಲಕತ್ವದಲ್ಲಿರುವ ಕೊಬ್ಬರಿ ಕಾರ್ಖಾನೆಯಲ್ಲಿ ನಿನ್ನೆ ರಾತ್ರಿ ಈ ಬೆಂಕಿ ಅನಾಹುತ ಉಂಟಾಗಿದೆ.

ಇದರೊಳಗಿದ್ದ ಕಿಲೋ ಗಟ್ಟಲೆಯಷ್ಟು ಕೊಬ್ಬರಿ, ತೆಂಗಿನಕಾಯಿ, ಒಣಗಿಸಲು ಬಳಸುವ  ಡ್ರೈಯರ್ ಮತ್ತಿತರ ಯಂತ್ರಗಳು ಸೇರಿದಂತೆ ಇಡೀ ಕಾರ್ಖಾನೆಯೇ ಬಹುತೇಕ ಬೆಂಕಿಗಾಹುತಿಯಾಗಿದೆ. ಈ ಬಗ್ಗೆ ಮಾಹಿತಿ  ಲಭಿಸಿದ ಅಸಿಸ್ಟೆಂಟ್ ಸ್ಟೇಷನ್ ಆಫೀಸರ್ ಸಂತೋಷ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕ ದಳದವರು ತಕ್ಷಣ ಎರಡು ಇಂಜಿನ್‌ಗಳಲ್ಲಾಗಿ ಘಟನೆ ಸ್ಥಳಕ್ಕೆ ಆಗಮಿಸಿ ಗಂಟೆಗಳ ಕಾಲ ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಬೆಂಕಿ ನಂದಿಸುವಲ್ಲಿ ಸಫಲರಾದರು. ಊರ ವರೂ ಅವರೊಂದಿಗೆ ಸಹಕರಿಸಿದರು.

You cannot copy contents of this page