ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರ ಜೀರ್ಣೋದ್ಧಾರ ನಿಧಿ ಸಂಗ್ರಹಕ್ಕೆ ಚಾಲನೆ

ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿದ್ದು, ಈ ವೇಳೆ ಕ್ಷೇತ್ರದ ಜೀರ್ಣೋದ್ಧಾರ ನಿಧಿ ಸಂಗ್ರಹ ಹಾಗೂ ಲಕ್ಕಿ ಕೂಪನ್ ಬಿಡುಗಡೆ ನಡೆಯಿತು. ಈ ಬಗ್ಗೆ ನಡೆದ ಸಭೆಯನ್ನು ಉದ್ಘಾಟಿಸಿದ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಲಕ್ಕಿ ಕೂಪನ್ ಬಿಡುಗಡೆಗೊಳಿಸಿ ಜೀರ್ಣೋದ್ಧಾರ ನಿಧಿ ಸಂಗ್ರಹಕ್ಕೆ ಚಾಲನೆ ನೀಡಿ ಅನುಗ್ರಹಿ ಸಿದರು. ಭಾಸ್ಕರ ಮಣಿಯಾಣಿ ಕೋಳಿಕ್ಕಾಲು ಸಭೆಯಲ್ಲ್ಲಿ ಅಧ್ಯಕ್ಷತೆ ವಹಿಸಿದರು. ಉದ್ಯಮಿ  ವಸಂತ ಪೈ ಬದಿಯಡ್ಕ, ಸಂಜೀವ ಶೆಟ್ಟಿ ಮೊಟ್ಟೆಕುಂಜ, ಉದ್ಯಮಿ ಶಂಕರನಾ ರಾಯಣ ಮಯ್ಯ ಬದಿಯಡ್ಕ,  ಗಣೇಶ ವತ್ಸ ಮುಳ್ಳೇರಿಯ, ಎ.ಬಿ. ಗಂಗಾಧರ ಬಲ್ಲಾಳ್ ಅಡ್ವಳ, ವಿನೋದ್ ಬೇಂಗತ್ತಡ್ಕ ಶುಭಕೋರಿದರು. ಕೇಶವ ಕೆ ಕೋಳಿಕ್ಕಾಲು ಸ್ವಾಗತಿಸಿ, ದೇವಾನಂದ ಶೆಟ್ಟಿ ವಂದಿಸಿದರು. ಯತೀಶ್ ಕುಮಾರ್ ರೈ ನಿರೂಪಿಸಿದರು. ದೇವಸ್ಥಾನದ ಜೀರ್ಣೋದ್ಧಾರ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಮಾರ್ಚ್ ೧ರಿಂದ ಬ್ರಹ್ಮಕಲಶ ನಡೆ ಯಲಿದೆಯೆಂದು ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page