ಕೋಳ್ಯೂರು ಕ್ಷೇತ್ರದ ಕಳ್ಳತನ ವಿರುದ್ಧ ಖಂಡನಾ ಸಭೆ

ವರ್ಕಾಡಿ: ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಿಂದ ಇತ್ತೀಚೆಗೆ ಚಿನ್ನಾಭರಣ ಕಳವುಗೈದು ಕ್ಷೇತ್ರವನ್ನು ಅಪವಿತ್ರಗೊಳಿಸಿದ ವಿರುದ್ದ ಖಂಡನಾ ಸಭೆ ಮಜೀರ್ಪಳ್ಳ ಪೇಟೆ ಯಲ್ಲಿ ನಡೆಯಿತು. ದೇವಸ್ಥಾನದಿಂದ ಕಳವುಗೈದ ಚಿನ್ನಾಭರಣ ಸಹಿತ ಆರೋಪಿಗಳನ್ನು ಮುಂದಿನ 15 ದಿನಗಳಗೊಳಗಾಗಿ ಪತ್ತೆ ಹಚ್ಚದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗು ವುದು ಎಂದು ಶ್ರೀ ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ಬೋಳಂತಕೋಡಿ ರಾಮ ಭಟ್‌ಎಚ್ಚರಿಕೆ ನೀಡಿದರು. ಕ್ಷೇತ್ರದ ಪ್ರಧಾನ ಅರ್ಚಕÀ ವೇದ ಮೂರ್ತಿ ರವಿಶಂಕರ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಕಾರ್ಯ ದರ್ಶಿ ವಿಜಯಕುಮಾರ್ ರೈ, ಕಾಂಗ್ರೆಸ್ ನೇತಾರ ಹರ್ಷಾದ್ ವರ್ಕಾಡಿ, ಸಿಪಿಎಂ ನೇತಾರ ಕೆ.ಆರ್. ಜಯಾ ನಂದ, ಕ್ಷೇತ್ರದ ಪವಿತ್ರಪಾಣಿ ರಾಜೇಶ್ ತಾಳಿತ್ತಾಯ, ಮೊಕ್ತೇಸರ ಕೃಷ್ಣ ಭಟ್‌ಚಕ್ರಕೋಡಿ, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ .ಕೆ ಪಾವೂರು, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂ ದರಿ ಆರ್. ಶೆಟ್ಟಿ, ವರ್ಕಾಡಿ ಪಂ. ಅಧ್ಯಕ್ಷೆ ಭಾರತಿಎಸ್., ಬಿಜೆಪಿ ನೇತಾರ ರಾದ ಆದರ್ಶ್.ಬಿ.ಎಂ, ಮಣಿಕಂಠರೈ, ಸಿಪಿಐ ನೇತಾರ ರಾಮಕೃಷ್ಣ ಕಡಂ ಬಾರ್, ಸಿಪಿಎಂ ನೇತಾರ ಬೂಬ.ಡಿ, ಕಾಂಗ್ರೆಸ್‌ನ ಪಿ.ಸೋಮಪ್ಪ, ಸಂತಡ್ಕ ಶ್ರೀ ಅರಸು ಸಂಕಲ ದೈವಸ್ಥಾನದ ಡಾ.ಶ್ರೀಧರ ಭಟ್, ಕಾವಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಸುಭಾಶ್ ಅಡಪ, ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಸೂರ್ಯನಾರಾಯಣಯ್ಯ, ಶ್ರೀ ಕ್ಷೇತ್ರಕಣಂತೂರುನ ಮೊಕ್ತೇಸರ ದೇವಿಪ್ರಸಾದ್ ಪೊಯ್ಯತ್ತಾಯ, ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಆರ್.ಎಸ್.ಎಸ್ ಮುಖಂಡ ಲೋಕೇಶ್‌ಜೋಡುಕಲ್ಲು, ಧಾರ್ಮಿಕ ಮುಂದಾಳುಗಳಾದ ಗೋಪಾಲ್ ಶೆಟ್ಟಿ ಅರಿಬೈಲು, ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು, ಕೃಷ್ಣಪ್ಪ, ಸೋಮನಾಥ ಕಾರಂತ ಮಾತನಾ ಡಿದರು. ಕ್ಷೇತ್ರದ ಮೊಕ್ತೇಸರÀ ಕೃಷ್ಣ ಕುಮಾರ್ ಉತ್ತಾರಕೊಡಂಗೆ ಸ್ವಾಗತಿಸಿ, ಚಂದ್ರಕುಮಾರ್ ಬಲಿಪಗುಳಿ ವಂದಿಸಿದರು. ಹಿರಿಯ ಪತ್ರಕರ್ತ ಗಣೇಶ್ ಭಟ್ ನಿರೂಪಿಸಿದರು.

Leave a Reply

Your email address will not be published. Required fields are marked *

You cannot copy content of this page