ಕ್ರೈಸ್ತ ಬಾಂಧವರಿಂದ ಈಸ್ಟರ್ ಆಚರಣೆ

ಕಾಸರಗೋಡು:  ಏಸು ಕ್ರಿಸ್ತರ ಪುನರುತ್ಥಾನದ ಸ್ಮರಣೆಯ ಈಸ್ಟರ್ ಹಬ್ಬವನ್ನು  ಕ್ರೈಸ್ತ ಬಾಂಧವರು ಭಕ್ತಿ, ಸಂಭ್ರಮದಿಂದ ಆಚರಿಸಿದರು.  ಇದರಂಗವಾಗಿ ಚರ್ಚ್‌ಗಳಲ್ಲಿ ಈಸ್ಟರ್ ಜಾಗರಣೆ, ಪ್ರಾರ್ಥನೆ, ಬಲಿಪೂಜೆ ನಡೆಯಿತು. ಕಯ್ಯಾರು ಕ್ರಿಸ್ತರಾಜ ಇಗರ್ಜಿಯಲ್ಲಿ ನಡೆದ ಕಾರ್ಯಕ್ರಮವನ್ನು  ಜೆಪ್ಪು ಸೆಮಿನರಿಯ ನಿವೃತ್ತ ಪ್ರಾಧ್ಯಾಪಕ ವಂ| ಫಾ|  ವಿಲ್ಲಿಯಂ ಬರ್ಬೋಜ ನೆರವೇರಿಸಿದರು. ಧರ್ಮಗುರು ವಂ| ಫಾ| ವಿಶಾಲ್ ಮೋನಿಸ್ ನೇತೃತ್ವ ನೀಡಿದರು.  ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಫಾಸ್ಖ ಹಬ್ಬದಂಗವಾಗಿ ಶನಿವಾರ ರಾತ್ರಿ ಜಾಗರಣೆ ರಾತ್ರಿ ಆಚರಿಸಲಾಯಿತು. ದಿವ್ಯಬಲಿಪೂಜೆ,ಸಂತರ ಸ್ಮರಣೆ, ಆಶೀರ್ವಚನ ನಡೆಯಿತು.  ಧರ್ಮಗುರು ಫಾ| ಹೆರಾಲ್ಡ್ ಡಿ’ಸೋಜಾ ನೇತೃತ್ವ ನೀಡಿದರು. ಫಾ| ಕ್ಲೋಡ್ ಕೋರ್ಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page