ಚೆನ್ನಿಕ್ಕರೆ ನಿವಾಸಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ವ್ಯಕ್ತಿಯೊಬ್ಬರು  ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕಾಸರಗೋಡು ಚೆನ್ನಿಕ್ಕರೆ ನಿವಾಸಿ ಪಿ. ಸುರೇಶ್ (60) ಎಂಬವರು ಮೃತಪಟ್ಟ ವ್ಯಕ್ತಿ. ಇವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ  ಕಂಪೆನಿಯ ತಾತ್ಕಾಲಿಕ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ನಿನ್ನೆ ರಾತ್ರಿ 8 ಗಂಟೆ ವೇಳೆ ನೆಲ್ಲಿಕುಂಜೆ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. 

 ದಿವಂಗತರಾದ ಸುಬ್ರಹ್ಮ ಣ್ಯನ್-ಸರಸ್ವತಿ ದಂಪತಿಯ ಪುತ್ರನಾದ ಮೃತರು ಪತ್ನಿ ಪ್ರೀತ, ಮಕ್ಕಳಾದ ಅಭಿ, ಅನುಶ್ರೀ, ಸಹೋ ದರ ಮೋಹನನ್, ಸಹೋದರಿ ಮಾಲತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮತ್ತಿಬ್ಬರು ಸಹೋದರರಾದ ಗೋಪಿನಾಥ್ ಹಾಗೂ ಪ್ರಕಾಶ್ ಎಂಬಿವರು ಈ ಹಿಂದೆ ನಿಧನಹೊಂದಿದ್ದಾರೆ.

Leave a Reply

Your email address will not be published. Required fields are marked *

You cannot copy content of this page