ಛಾಪಾ ಕಾಗದ ಕ್ಷಾಮ: ತನಿಖೆಗೆ ಮರ್ಚೆಂಟ್ಸ್ ಅಸೋಸಿಯೇಶನ್ ಮನವಿ

ಕಾಸರಗೋಡು: ವಿವಿಧ ಅಗತ್ಯ ಗಳಿಗೆ ಛಾಪಾ ಕಾಗದಗಳಿಗಾಗಿ ಕಾಸರಗೋಡು ನಗರಕ್ಕೆ ತಲುಪುವವರು ಸುತ್ತಾಟ ನಡೆಸಬೇಕಾದ ಅವಸ್ಥೆ ಇದೆ ಎಂದು ಮರ್ಚೆಂಟ್ಸ್ ಅಸೋಸಿಯೇ ಶನ್ ಆರೋಪಿಸಿದೆ. ಛಾಪಾ  ಕಾಗದಕ್ಕೆ ಬೇಕಾಗಿ ಕಾಸರಗೋಡು ನಗರದಿಂದ  ೪ ಕಿಲೋ ಮೀಟರ್ ದೂರದ ವಿದ್ಯಾನಗರದಲ್ಲಿರುವ ಕಲೆಕ್ಟರೇಟ್ ಸಮುಚ್ಚಯಕ್ಕೆ ತೆರಳಬೇಕಾಗುತ್ತಿದೆ. ಇ-ಸ್ಟಾಂಪ್ ಜ್ಯಾರಿಗೊಳ್ಳುವುದಾಗಿ ತಿಳಿಸಿದ್ದರೂ ಅದನ್ನು ಇದುವರೆಗೂ ಲಭ್ಯಗೊಳಿಸಲು ಸರಕಾರ ಮುಂದಾಗಲಿಲ್ಲ.

ಪ್ರಸ್ತುತ ಛಾಪಾ ಕಾಗದ ಕ್ಷಾಮವನ್ನು ಸ್ಟಾಂಪ್ ವೆಂಡರ್‌ಗಳು ಮನಃಪೂರ್ವಕವಾಗಿ ಮಾಡು ತ್ತಿದ್ದಾರೋ ಎಂಬುದನ್ನು ತನಿಖೆ ನಡೆಸಬೇಕೆಂದು ಆಗ್ರಹಿಸಿ ಸಹಕಾರಿ ರಿಜಿಸ್ಟ್ರೇಶನ್ ಇಲಾಖೆ ಸಚಿವರಿಗೆ ಮರ್ಚೆಂಟ್ಸ್ ಅಸೋಸಿಯೇಶನ್ ಮನವಿ ನೀಡಿದೆ.

Leave a Reply

Your email address will not be published. Required fields are marked *

You cannot copy content of this page