ತೂಮಿನಾಡಿನಲ್ಲಿ ಘರ್ಷಣೆ :ಇಬ್ಬರಿಗೆ ಗಾಯ

ಮಂಜೇಶ್ವರ: ತೂಮಿನಾಡಿನ ಹೋಟೆಲೊಂದರ ಮುಂಭಾಗ ತಂಡಗಳೊಳಗೆ ಉಂಟಾದ ಘರ್ಷಣೆಯಿಂದ ಇಬ್ಬರು ಗಾಯಗೊಂಡಿದ್ದು, ಪೊಲೀಸರು ಕೇಸು ದಾಖಲಿಸಿದ್ದಾರೆ.  ಗಾಯಗೊಂಡ ಮಂಜೇಶ್ವರ ನಿವಾಸಿ ಅಶ್ವತ್ಥ್ ನೀಡಿದ ದೂರಿನಂತೆ ಪ್ರಜ್ವಲ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಜ್ವಲ್‌ಗೂ ಗಾಯವಾಗಿದ್ದು, ಈತ ನೀಡಿದ ದೂರಿನಂತೆ ಅಶ್ವತ್ಥ್ ಹಾಗೂ ಇತರ ೫ ಮಂದಿ ವಿರುದ್ಧ ಕೇಸು ದಾಖಲಿಸಿದ್ದಾರೆ.

ಹೋಟೆಲ್ ಮುಂಭಾಗದಲ್ಲಿ ಮಾತಿಗೆ ಮಾತು ಬೆಳೆದು ಅದು ಘರ್ಷಣೆಗೆ ತಿರುಗಿದೆ. ಈ ವೇಳೆ ಪ್ರಜ್ವಲ್ ಎಂಬಾತ ಅಶ್ವತ್ಥ್‌ಗೆ ಇರಿದುದ್ದು, ಅಶ್ವತ್ಥ್ ಹಾಗೂ ಇತರರು ಸೇರಿ ಪ್ರಜ್ವಲ್‌ನ ಕಾಲು ಮುರಿದಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ  ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page