ಪೆಟ್ರೋಲ್ ಸಾಗಾಟದ ಟ್ಯಾಂಕರ್ ಲಾರಿಯಡಿ ಬೆಂಕಿ: ತಪ್ಪಿದ ದುರಂತ

ಉಪ್ಪಳ: ಸಂಚರಿಸುತ್ತಿದ್ದ  ಟ್ಯಾಂಕರ್ ಲಾರಿಯಡಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ಅದನ್ನು ನಂದಿಸಲು ಸಾಧ್ಯ ವಾದು ದರಿಂದ ಭಾರೀ ಅಪಾಯ ತಪ್ಪಿದೆ. ನಿನ್ನೆ ಸಂಜೆ 6.30ಕ್ಕೆ ಪೊಸೋಟು ಸೇತುವೆ ಬಳಿ ಈ ಘಟನೆ ನಡೆದಿದೆ. ಮಂಗಳೂರಿನಿಂದ ಕಲ್ಲಿಕೋಟೆಗೆ ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿ ಅಡಿ ಭಾಗದಲ್ಲಿ ಬೆಂಕಿ ಕಾಣಿಸಿದೆ. ಈ ಲಾರಿಯ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರರ ಗಮನಕ್ಕೆ ಇದು ಬಂದಿದ್ದು, ಅವರು ಕೂಡಲೇ ಲಾರಿ ಚಾಲಕನಿಗೆ ಮಾಹಿತಿ ನೀಡಿದರು. ಚಾಲಕ ಲಾರಿ ನಿಲ್ಲಿಸಿ ಪರಿಶೀಲಿಸಿ ದಾಗ ಹಿಂಬದಿ ಟಯರ್‌ನ ಬದಿಯಲ್ಲಿ ಬೆಂಕಿ ಕಾಣಿಸಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಉಪ್ಪಳ ಅಗ್ನಿಶಾಮಕ ದಳ ತಲುಪಿ ಬೆಂಕಿ ನಂದಿಸಿದುದರಿಂದ ಭಾರೀ ಅಪಾಯವೊಂದು ತಪ್ಪಿದೆ.

Leave a Reply

Your email address will not be published. Required fields are marked *

You cannot copy content of this page