ಪೆರ್ಲ ದೇವಲೋಕದಲ್ಲಿ ಕಾಲೇಜಿನಿಂದ ಕಳವಿಗೆತ್ನ: ಇಬ್ಬರು ಕೈಯಾರೆ ಸೆರೆ

ಪೆರ್ಲ: ಇಲ್ಲಿಗೆ  ಸಮೀಪದ ದೇವಲೋಕ ಎಂಬಲ್ಲಿನ ಕಾಲೇಜಿನಿಂದ ಕಳವುಗೈಯ್ಯಲು ಯತ್ನಿಸಿದ ಇಬ್ಬರನ್ನು ಕಾವಲುಗಾರ ಕೈಯ್ಯಾರೆ ಸೆರೆಹಿಡಿದ  ಘಟನೆ ನಿನ್ನೆ ರಾತ್ರಿ ನಡೆದಿದೆ.

ದೇವಲೋಕದ ಸೈಂಟ್ ಗ್ರಿಗೋರಿಯಸ್ ಕಾಲೇಜಿನಲ್ಲಿ ಕಳವು ಯತ್ನ ನಡೆದಿದೆ. ಈ ಸಂಬಂಧ ಶೇಣಿ ಬಲ್ತಕಲ್ಲು ನಿವಾಸಿ ಸುಧೀರ್ (29), ಕಾಟುಕುಕ್ಕೆಯ  ರವಿಪ್ರಸಾದ್ (25) ಎಂಬಿವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ನಿನ್ನೆ ರಾತ್ರಿ ಕಾಲೇಜಿಗೆ ತಲುಪಿದ ಈ ಇಬ್ಬರು ಗೋಡೆಯಿಂದ ಕಿಟಿಕಿ  ಕಳಚಿ ತೆಗೆದು ಕಬ್ಬಿಣವನ್ನು ಬೇರ್ಪಡಿಸುತ್ತಿದ್ದಾಗ  ಶಬ್ದ ಕೇಳಿದ ಕಾವಲುಗಾರ ಅಲ್ಲಿಗೆ ತಲುಪಿದ್ದಾನೆ.  ಕೂಡಲೇ  ಅವರಿಬ್ಬರನ್ನು ಸೆರೆಹಿಡಿದು ಸ್ಥಳೀಯರಿಗೆ  ವಿಷಯ ತಿಳಿಸಲಾಯಿತು.

ಬಳಿಕ ವಿಷಯ ತಿಳಿದು  ಸ್ಥಳಕ್ಕೆ ತಲುಪಿದ ಪೊಲೀಸರು  ಕಳ್ಳರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಅಲ್ಪಕಾಲದಿಂದ  ಈ ಕಾಲೇಜು ಮುಚ್ಚುಗಡೆಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page