ಪೆರ್ಲ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ದೀಪೋತ್ಸವ: ಸ್ವಾಗತ ಸಮಿತಿ ರಚನೆ

ಪೆರ್ಲ: ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದ 48ನೇ ವಾರ್ಷಿಕ ಸಮಾರಂಭದ ಅಂಗವಾಗಿ ಶ್ರೀ ಅಯ್ಯಪ್ಪನ್ ದೀಪೋತ್ಸವ ಡಿ.3ರಿಂದ 5ರವರೆಗೆ ಶ್ರೀ ಅಯ್ಯಪ್ಪ ಮಂದಿರದಲ್ಲಿ ಜರಗಲಿದೆ. ಇದೇ ಸಂದರ್ಭ ಭಜನಾ ಮಂದಿರ ವಠಾರದಲ್ಲಿ ನಿರ್ಮಿಸಲಾಗಿ ರುವ ನೂತನ ಸಭಾಂಗಣದ ಲೋಕಾ ರ್ಪಣೆ ನಡೆಯುವುದು. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ, ಶುಲುವಾಲುಮೂಲೆ ಶಿವಸುಬ್ರಹ್ಮಣ್ಯ ಭಟ್ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯುವುದು.
ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆ ಮಂದಿರದಲ್ಲಿ ಜರಗಿತು. ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ವ್ಯಾಪ್ತಿಯ ಭಜನಾ ಮಂದಿರ ಸಮಿತಿ ಪದಾಧಿಕಾರಿಗಳು, ಗುರುಸ್ವಾಮಿಗಳು ಹಾಗೂ ಇತರ ಭಕ್ತರನ್ನು ಒಟ್ಟುಸೇರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ ಗೌರವಾಧ್ಯಕ್ಷ, ಶ್ರೀಧರ ಗುರುಸ್ವಾಮಿ ಬಜಕೂಡ್ಲು ಅಧ್ಯಕ್ಷ ಹಾಗೂ ಪದ್ಮನಾಭ ಸುವರ್ಣ ಬಜಕೂಡ್ಲು ಪ್ರಧಾನ ಕಾರ್ಯದರ್ಶಿಯಾಗಿರುವ ಸಮಿತಿ ರಚಿಸಲಾಯಿತು. ವಿವಿಧ ಉಪಸಮಿತಿ ರಚಿಸಿ ದೀಪೋತ್ಸವ ಯಶಸ್ವಿಯಾಗಿ ನಡೆಸಲು ತೀರ್ಮಾನಿಸಲಾಯಿತು. ಶಿವರಾಮ ಬೇಂಗಪದವು ಸ್ವಾಗತಿಸಿ, ಪದ್ಮನಾಭ ಸುವರ್ಣ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page