ಪೈವಳಿಕೆಯಲ್ಲೊಂದು ಅಪಘಾತ ವಲಯ: ವೇಗ ನಿಯಂತ್ರಕ ಸ್ಥಾಪಿಸಲು ಆಗ್ರಹ

ಪೈವಳಿಕೆ: ಕೈಕಂಬ-ಬಾಯಾರು ರಸ್ತೆಯನ್ನು ಚೇವಾರು ರಸ್ತೆ ಸಂಗಮಿ ಸುವ ಪೈವಳಿಕೆಯಲ್ಲಿ ಅಪಘಾತಗಳು ನಿತ್ಯ ಘಟನೆಯಾಗುತ್ತಿದ್ದು, ಇಲ್ಲಿ ವೇಗ ನಿಯಂತ್ರಕವನ್ನು ಅಳವಡಿಸ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇಲ್ಲಿ ಅಪಘಾತವಲಯ ಎಂಬ ಸೂಚನಾ ಬೋರ್ಡ್ ಪ್ರದರ್ಶಿಸಲು ಆಗ್ರಹಿಸಲಾ ಗಿದೆ. ಕೈಕಂಬ ಭಾಗದಿಂ ದ, ಬಾಯಾರು ಭಾಗದಿಂದ, ಚೇವಾ ರು ಭಾಗದಿಂದ ಬರುವ ವಾಹನಗಳು ಇಲ್ಲಿ ಸಂಗಮಿಸುವ ವೇಳೆ ಅಪಘಾತ ಸೃಷ್ಟಿಯಾಗುತ್ತಿದೆ. ವಾಹನಗಳು ವೇಗದಲ್ಲಿ ಸಂಚರಿಸುವುದೇ  ಅಪಘಾತಕ್ಕೆ ಕಾರಣವಾಗುತ್ತಿರುವುದು ಎಂದು ಸ್ಥಳೀಯರು ತಿಳಿಸಿದ್ದು, ಇಲ್ಲಿ  ವಾಹನಗಳ ವೇಗ ನಿಯಂತ್ರಕವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಹಿಂದೆ ಬೊಲೇರೋ-ಆಟೋ ರಿಕ್ಷಾ  ಮಧ್ಯೆ ಢಿಕ್ಕಿಯಾಗಿ ಅಪಘಾತ ಉಂಟಾಗಿದ್ದು, ಆಟೋಚಾಲಕ ಗಾಯಗೊಂಡಿದ್ದಾರೆ. ಜೀಪ್ ಢಿಕ್ಕಿ ಹೊಡೆದು ಉಂಟಾದ ಅಪ ಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಅಲ್ಲದೆ ವಿವಿಧ ಸಣ್ಣಪುಟ್ಟ ಅಪಘಾತಗಳು ಇಲ್ಲಿ ನಿತ್ಯವೂ ಸಂಭವಿಸುತ್ತಿದೆ. ಈ ಹಿನ್ನೆಲೆ ಯಲ್ಲಿ ವಾಹನಗಳ ವೇಗ ಕಡಿಮೆ ಮಾಡಲು ಸೂಕ್ತ ವ್ಯವಸ್ಥೆ ಕೈಗೊಳ್ಳಬೇ ಕೆಂದು ಆಗ್ರಹಿಸಿ ವಿವಿಧ ಅಧಿಕಾರಿಗಳಿಗೆ, ಶಾಸಕರಿಗೆ  ಸ್ಥಳೀಯರು ಮನವಿ ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page