ಬಂಗ್ರಮಂಜೇಶ್ವರ: ಓಜ ಸಾಹಿತ್ಯ ಕೂಟದಿಂದ ಏಕಾಹ ಭಜನೆ

ಮಂಜೇಶ್ವರ: ಬಂಗ್ರಮAಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವ ಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಓಜ ಸಾಹಿತ್ಯ ಕೂಟ ಇದರ 64ನೇ ವರ್ಷದ ಏಕಾಹ ಭಜನೋತ್ಸವ ಇಂದು ಮುಂಜಾನೆ ಕ್ಷೇತ್ರದ ತಂತ್ರಿ ವರ್ಯ ಉಮೇಶ ತಂತ್ರಿ ಮಂಗಳೂರು, ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ಪ್ರಕಾಶ್ಚಂದ್ರ ಶ್ರೌತಿ ದೀಪ ಪ್ರಜ್ವಲನೆಗೊಳಿಸಿ ಭಜನೆಗೆ ಚಾಲನೆ ನೀಡಿದರು.
ಈ ವೇಳೆ ಕ್ಷೇತ್ರದ ಮೊಕ್ತೇಸರು, ಓಜ ಸಾಹಿತ್ಯ ಕೂಟದ, ಕ್ಷೇತ್ರದ ಹಾಗೂ ಮಹಿಳಾ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು. ನಾಳೆ ಸೂರ್ಯೋ ದಯಕ್ಕೆ ಮಂಗಳಾಚರಣೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page