ಬಂಗ್ರಮಂಜೇಶ್ವರ ಕ್ಷೇತ್ರದಿಂದ ಮಕ್ಕಳಿಗೆ ಪುಸ್ತಕ ವಿತರಣೆ

ಮಂಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ವತಿಯಿಂದ ಮಕ್ಕಳಿಗೆ ವಿತರಿಸ¯Ä ಪುಸ್ತಕಗಳನ್ನು ಶ್ರೀ ಕ್ಷೇತ್ರದಲ್ಲಿ ವಿವಿಧ ಪ್ರಾಂತ್ಯಗಳಿಗೆ ಹಸ್ತಾಂತರಿಸಲಾಯಿತು. ಮಂಗಳೂರು, ಮಂಜೇಶ್ವರ, ಬಾಯಾರು, ಮಂಗಲ್ಪಾಡಿ, ಕಾಸರಗೋಡು, ಪುತ್ತೂರು ಪ್ರಾಂತ್ಯಗಳ ಮೊಕ್ತೇಸರರು ಪುಸ್ತಕವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಪ್ರಕಾಶ್ಚಂದ್ರ ಶ್ರೌತಿ, ಕ್ಷೇತ್ರದ ಅಧ್ಯಕ್ಷ ಬಿ.ಎಂ ಯದುನಂದನ ಆಚಾರ್ಯ ಕಡಂಬಾರು, ಪ್ರಧಾನ ಮೊಕ್ತೇಸರ ಉಳುವಾರು ವೆಂಕಟ್ರಮಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಪ್ರತಾಪನಗರ, ಕೋಶಾಧಿಕಾರಿ ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಜತೆ ಕಾರ್ಯದರ್ಶಿ ನಾಗರಾಜ ಆಚಾರ್ಯ ಕಾಸರಗೋಡು ಉಪಸ್ಥಿತರಿದ್ದರು. ರಾಮಚಂದ್ರ ಆಚಾರ್ಯ, ಎಂ.ಆರ್ ಹರೀಶ ಆಚಾರ್ಯ, ಎಸ್.ಕೆ ಮೋಹನದಾಸ್ ಆಚಾರ್ಯ, ವಿವೇಕ್ ಆಚಾರ್ಯ, ಗಣೇಶ ಆಚಾರ್ಯ, ಜಯಂತ ಆಚಾರ್ಯ ಕಡಂಬಾರು, ಬಿ.ಎಂ ಅನಂತ ಆಚಾರ್ಯ ಪುಸ್ತಕವನ್ನು ಪಡೆದÀÄಕೊಂಡರು.

Leave a Reply

Your email address will not be published. Required fields are marked *

You cannot copy content of this page