ಬಾವಿಗೆ ಹಾರಿ ಯುವತಿ ಸಾವು

ಕಾಸರಗೋಡು:   ಯುವತಿಯೋರ್ವೆ ಬಾವಿಗೆ ಹಾರಿ ಸಾವನ್ನಪ್ಪಿದ ಘಟನೆ ನಗರದಲ್ಲಿ ಇಂದು ಮುಂಜಾನೆ ನಡೆದಿದೆ.

ಕಾಸರಗೋಡು ಹಳೆ ಸೂರ್ಲು ಬಟ್ಟಂಬಾರೆ ಶೈಲೇಶ್ ನಿವಾಸದ ಎಸ್. ಶಿವ ಎಂಬವರ ಪತ್ನಿ ಶರ್ಮಿಳ (44) ಸಾವನ್ನಪ್ಪಿದ ಯುವತಿ. ಇವರು ನಿನ್ನೆ ರಾತ್ರಿ  ಸುಮಾರು 11.30ರ ವೇಳೆ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಮನೆಯವರು ಹುಡುಕಾಡಿದಾಗ  ಇಂದು ಮುಂಜಾನೆ ಸುಮಾರು ೩.೩೦ರ ವೇಳೆ ಮನೆ ಪಕ್ಕದ ಹಿತ್ತಿಲೊಂದರ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಅದನ್ನು ಕಂಡವರು ತಕ್ಷಣ ನೀಡಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಘಟನೆ ಸ್ಥಳಕ್ಕೆ ಆಗಮಿಸಿ ಶರ್ಮಿಳಾರನ್ನು  ಬಾವಿಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ  ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಮೃತ ಶರ್ಮಿಳಾರ ಪತಿ ಶಿವ ನಗರದ ಅಮೈ ರಸ್ತೆ ಬಳಿ ಅಕೌಂಟೆಂಟ್ ಕಚೇರಿ ನಡೆಸುತ್ತಿದ್ದು ಅವರ ಜೊತೆ   ಅದೇ ಕಚೇರಿಯಲ್ಲಿ ಶರ್ಮಿಳಾ ಕೂಡಾ ಅಕೌಂಟೆಂಟ್ ಆಗಿ ದುಡಿಯುತ್ತಿದ್ದರು.

ದಿ| ಬಾಬು ಪೂಜಾರಿ-ಲೀಲಾವತಿ ದಂಪತಿ ಪುತ್ರಿಯಾಗಿರುವ ಶರ್ಮಿಳಾ ಮಕ್ಕಳಾದ ತನುಷ್, ತುಷಾರ್, ಸಹೋದರರಾದ ಪ್ರದೀಪ್ ಮತ್ತು ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಕಾಸರಗೋಡು ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page