ಮಂಜೇಶ್ವರ ಪಂ. ಆಡಳಿತ ವೈಫಲ್ಯ ಆರೋಪಿಸಿ ಪಿಡಿಪಿ ತರಾಟೆ

ಮಂಜೇಶ್ವರ: ಪಂಚಾಯತ್‌ನ ವಿವಿಧ ಯೋಜನೆಗಳು ಮಧ್ಯದಲ್ಲೇ ಮೊಟಕುಗೊಂಡಿದ್ದು, ಅದಕ್ಕೆ ಪರಿಹಾರ ಕಾಣದೆ ಇರುವುದಕ್ಕೆ ಪ್ರತಿಭಟಿಸಿ ಪಿಡಿಪಿ  ಪ್ರತಿನಿಧಿಗಳ ತಂಡ ಪಂಚಾಯತ್ ಆಡಳಿತ ಸಮಿತಿ, ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದಿದೆ.  ದೀರ್ಘ ಕಾಲದಿಂದ  ಅಂಬಿತ್ತಡಿ ಅಂಗನವಾಡಿ ವಿಷಯವನ್ನು  ಗಣನೆಗೆ ತೆಗೆಯದೆ ಪಂಚಾಯತ್ ಮಕ್ಕಳ ಭವಿಷ್ಯದಲ್ಲಿ ರಾಜಕೀಯ ಆಟ ನಡೆಸುತ್ತಿದೆ ಯೆಂದು ಪಿಡಿಪಿ ಆರೋಪಿಸಿದೆ.  ಕುಂಜತ್ತೂರು, ತೂಮಿನಾಡು ಸೇರಿದಂತೆ ವಿವಿಧ ಕಡೆಗಳಲ್ಲಿ ಕಳಪೆ ನಿರ್ಮಾಣ ಕಾರಣದಿಂದ ರಸ್ತೆಗಳು ಹದಗೆಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಪಿಡಿಪಿ ಒತ್ತಾಯಿಸಿದೆ. ತ್ಯಾಜ್ಯ ವಿಲೇವಾರಿಗೆ ವ್ಯವಸ್ಥಿತ ಯೋಜನೆ ಜ್ಯಾರಿಗೆ ತರದ ಪಂಚಾಯತ್ ಮಂಜೇಶ್ವರದ ಬೀದಿ ಬೀದಿಗಳಲ್ಲಿ  ತ್ಯಾಜ್ಯ ರಾಶಿಬಿದ್ದು  ಗಬ್ಬೆದ್ದು ನಾರುತ್ತಿದೆ. ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದ್ದರೂ ಆಡಳಿತ ಸಮಿತಿ ಮೌನ ವಹಿಸಿದೆಯೆಂದು ಪಿಡಿಪಿ ದೂರಿದೆ.  ಈ ಬಗ್ಗೆ ಶೀಘ್ರ ಪರಿಹಾರ ನಡೆಸಬೇಕೆಂದು ಆಗ್ರಹಿಸಿ ಪಿಡಿಪಿ ಪ್ರತಿನಿಧಿಗಳು ಪಂಚಾಯತ್ ಆಡಳಿತ ಸಮಿತಿಯನ್ನು ಭೇಟಿಯಾಗಿದೆ.

Leave a Reply

Your email address will not be published. Required fields are marked *

You cannot copy content of this page