ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 3.02 ಕೋಟಿ ರೂ.ಗಳ ಕಾಮಗಾರಿ
ಉಪ್ಪಳ: ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಜ್ಯಾರಿಗೊಳಿಸಲು ಮೂರುಕೋಟಿ ಎರಡುಲಕ್ಷ ರೂ. ಮಂಜೂರು ಮಾಡಿರುವುದಾಗಿ ಶಾಸಕ ಎಕೆಎಂ ಅಶ್ರಫ್ ತಿಳಿಸಿದರು. ವಿಧಾನಸಭಾ ಮಂಡಲ ಆಸ್ತಿ ಅಭಿವೃದ್ಧಿ ಸ್ಕೀಂ, ಶಾಸಕರ ಪ್ರತ್ಯೇಕ ನಿಧಿ ಎಂಬಿವುಗಳಿAದ ಈ ಯೋಜನೆಗಳನ್ನು ಜ್ಯಾರಿಗೊಳಿಸಲಾಗುತ್ತಿದೆ. 16 ರಸ್ತೆ ಕಾಮಗಾರಿಗಳಿಗೆ, 1 ಕುಡಿಯುವ ನೀರು ಯೋಜನೆಗೆ ಈ ಮೊತ್ತ ಮಂಜೂರು ಮಾಡಲಾಗಿದೆ. ಮಣಿಮುಂಡ ಕಡಪ್ಪುರ-ಹನುಮಾನ್ನಗರ ಬೈಪಾಸ್ ರಸ್ತೆ 30 ಲಕ್ಷ ರೂ., ಪೆರಿಂಗಡಿ-ಶಾಸ್ತ್ರೇಶ್ವರ ಕ್ಷೇತ್ರ ರಸ್ತೆ 25 ಲಕ್ಷ ರೂ., ಚೆರುವಲ್ ಕಾಪು-ಮಂಡೆಕಾಪು ರಸ್ತೆ 25 ಲಕ್ಷ ರೂ., ಫಿರ್ದೋಸ್ನಗರ ರಸ್ತೆ 5 ಲಕ್ಷ., ಶಿರಿಯ ಶಾಲೆ ರಸ್ತೆ 7 ಲಕ್ಷ, ಸೋಂಕಾಲು-ಕೊಡAಗೆ ರಸ್ತೆ ಚರಂಡಿ 5 ಲಕ್ಷ, ಮುಸೋಡಿ-ಕಣ್ಣಂಗುಳ ಜುಮಾ ಮಸೀದಿ ರಸ್ತೆ 30 ಲಕ್ಷ (ಮಂಗಲ್ಪಾಡಿ ಪಂ.), ಶೆಟ್ಟಿಗದ್ದೆ ಕ್ರಾಸ್ ರಸ್ತೆ 10 ಲಕ್ಷ ರೂ., ಪೇರಾಲ್-ಪೊಟ್ಟೇರಿ ಹಿಲ್ ಟಾಪ್ ರಸ್ತೆ 10 ಲಕ್ಷ ರೂ., ಕೊಯಿಪ್ಪಾಡಿ-ಕಡಪ್ಪುರಂ ಕುಡಿಯುವ ನೀರು ಯೋಜನೆ 30 ಲಕ್ಷ ರೂ. (ಕುಂಬಳೆ ಪಂಚಾಯತ್), ಮದನಡ್ಕ-ಕಾವೇರಿಕಾನ ರಸ್ತೆ 10 ಲಕ್ಷ ರೂ., ಪಾಡಲಡ್ಕ-ಉಪ್ಪಿನ ರಸ್ತೆ 20 ಲಕ್ಷ ರೂ. (ಪುತ್ತಿಗೆ ಪಂ.), ನ್ಯೂಸ್ಟಾರ್ ಗ್ರೌಂಡ್ ರಸ್ತೆ 20 ಲಕ್ಷ, ದುರ್ಗಿಪಳ್ಳ-ಗೌರಿಯಾನಗರ ರಸ್ತೆ 20 ಲಕ್ಷ ರೂ.(ಮಂಜೇಶ್ವರ ಪಂ.), ಮುಟ್ಲ-ಪೊಯ್ಯೆ ರಸ್ತೆ 18 ಲಕ್ಷರೂ., ಕೊಮ್ಮಳದೇರ-ಅಡೆಕಳಕಟ್ಟೆ ರಸ್ತೆ 5 ಲಕ್ಷ, ದೊಡ್ಡಮನೆ ಕಾಲುದಾರಿ 17 ಲಕ್ಷ (ವರ್ಕಾಡಿ ಪಂ.), ಶೇಣಿ-ಉರ್ಮಿ ರಸ್ತೆ 5 ಲಕ್ಷ (ಎಣ್ಮಕಜೆ ಪಂ.), ಬೆಳ್ಳೂರು-ನಾರುಂಗುಳಿ ರಸ್ತೆ 5 ಲಕ್ಷ, ಅಮ್ಮೇರಿ-ಬೆದ್ರೋಡಿ ರಸ್ತೆ 5 ಲಕ್ಷ ರೂ.(ಪೈವಳಿಕೆ ಪಂ.) ಮೀಸಲಿಡಲಾಗಿದ್ದು, ಕಾಮಗಾರಿ ಕೂಡಲೇ ಪೂರ್ತಿಗೊಳಿಸಲು ಸಂಬAಧಪಟ್ಟವರಿಗೆ ಶಾಸಕರು ನಿರ್ದೇಶಿಸಿರುವುದಾಗಿ ತಿಳಿಸಿದ್ದಾರೆ.