ಮಹಿಳೆಯ ತಲೆಗೆ ಕಲ್ಲೆಸೆದು ಗಾಯ: ನರಹತ್ಯಾ ಯತ್ನ ಪ್ರಕರಣ ದಾಖಲು

ಕಾಸರಗೋಡು: ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿ ಕಲ್ಲೆಸೆದು ಮಹಿಳೆಗೆ ಗಾಯ ಉಂಟುಮಾಡಿದ ಘಟನೆ ನಗರದ ಚೆನ್ನಿಕ್ಕೆರೆಯಲ್ಲಿ ನಡೆದಿದೆ. ಚೆನ್ನಿಕ್ಕೆರೆಯ ಕುಂಞಿಕಣ್ಣನ್ ಎಂಬವರ ಪತ್ನಿ ದೇವಿ ಆರ್ (70) ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಚೆನ್ನಿಕ್ಕೆರೆ ನಿವಾಸಿ ಮಣಿ ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಅಕ್ಟೋಬರ್ ೧೭ರಂದು ಸಂಜೆ ಆರೋಪಿ ಮಣಿ ತನ್ನ ಮನೆ ಹಿತ್ತಿಲಿಗೆ ಅಕ್ರಮವಾಗಿ ನುಗ್ಗಿ ಬಂದು ಬೆದರಿಕೆಯೊಡ್ಡಿ ತನ್ನ ತಲೆಗೆ ಕಲ್ಲೆಸೆದು ಗಾಯಗೊಳಿಸಿದ್ದನೆಂದೂ ಪೊಲೀಸರಿಗೆ ನೀಡಿದ ದೂರಿನಲ್ಲಿ ದೇವಿ ಆರೋಪಿ ಸಿದ್ದಾರೆ.  ಗಾಯಗೊಂಡ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page