ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ವಾರ್ಷಿಕೋತ್ಸವ ಇಂದಿನಿಂದ

ಬದಿಯಡ್ಕ: ಮಾವಿನಕಟ್ಟೆ ಪರಿ ವಾರ ಸಮೇತ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ 43ನೇ ವಾರ್ಷಿ ಕೋತ್ಸವ ಇಂದಿನಿAದ 22ರ ತನಕ ವಿವಿಧ ದೈವಿಕ-ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಇಂದು ಪ್ರಾತಃಕಾಲ 6ಗಂಟೆಗೆ ದೀಪೋಜ್ವಲನ, ಮಹಾಗಣಪತಿ ಹೋಮ, ಮುದ್ರಾಧಾರಣೆ, ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಭಜನಾ ಸಂಘದವರಿAದ ಭಜನೆ, ನಂತರ ವಿವಿಧ ಭಜನಾ ಸಂಘಗಳಿAದ ಭಜನೆ. ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ಅನ್ನಸಂತರ್ಪಣೆ ಜರಗಿತು. ಅಪರಾಹ್ನ 2.30ರಿಂದ ಭಜನೆ, ರಾತ್ರಿ 8 ಗಂಟೆಗೆ ಸತ್ಯನಾರಾಯಣ ಪೂಜೆ, ಮಹಾಪೂಜೆ, 8.30ರಿಂದ ನಾಟ್ಯನಿಲ ಯಂ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಇವರ ಶಿಷ್ಯವೃಂದದವರಿAದ ನಾಟ್ಯ ವೈವಿಧ್ಯ.
ನಾಳೆ ಪ್ರಾತಃಕಾಲ 5 ಗಂಟೆಗೆ ಶರಣಂ ವಿಳಿ, ಭಜನೆ, 11 ಗಂಟೆಗೆ ಧಾರ್ಮಿಕ ಸಭೆ. ಶ್ರೀ ಮಂದಿರದ ಸೇವಾಸಮಿತಿ ಅಧ್ಯಕ್ಷ ವಿಶ್ವನಾಥನ್ ಬಳ್ಳಪದವು ಅಧ್ಯಕ್ಷತೆ ವಹಿಸುವರು. ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮ ಶ್ರೀ ಈಶವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡುವರು. ಅಧ್ಯಾಪಕ ಪ್ರಸಾದ್ ಧಾರ್ಮಿಕ ಭಾಷಣ ಮಾಡುವರು. ಹಿರಿಯ ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ಕೃಷಿಕ ಸಾಮಾಜಿಕ ಕಾರ್ಯಕರ್ತ ಡಾ. ವೇಣುಗೋಪಾಲ ಕಳೆಯತ್ತೋಡಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಳ್ಳುವರು. ದೇವಪ್ಪ ನಾಯ್ಕ ಪಿಲಿಕೂಡ್ಲು, ಲಕ್ಷಿö್ಮÃ ದ್ವಾರಕಾನಗರ ಇವರಿಗೆ ಗೌರವಾರ್ಪಣೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಅಪರಾಹ್ನ ವಿವಿಧ ಭಜನಾ ಸಂಘಗಳಿAದ ಭಜನೆ, 3.30ಕ್ಕೆ ಯಕ್ಷ ಕುಣಿತ ಭಜನೆ, ಸಂಜೆ 5ರಿಂದ ಚೆಂಡೆಮೇಳ ನಡೆಯಲಿದೆ. ಸಂಜೆ 6.30ಕ್ಕೆ ಹುಲ್ಪೆ ಮೆರವಣಿಗೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ಆರಂಭ, ತಾಂಬೋಲ ಪ್ರದರ್ಶನ, ಸಂಚಾರಿ ಭಜನೆ, ಕುಣಿತ ಭಜನೆ, ಸಿಂಗಾರಿ ಮೇಳದೊಂದಿಗೆ ವೈಭವದ ಮೆರವಣಿಗೆ ನಡೆಯಲಿದೆ. ರಾತ್ರಿ 8 ಗಂಟೆಯಿAದ ವಿದ್ಯಾಲಕ್ಷಿö್ಮ ಮೈಲ್ತೊಟ್ಟಿ, ಕಿರಣ್ ಕುಮಾರ್ ಕಾಸರಗೋಡು ಮತ್ತು ಬಳಗದವ ರಿಂದ ಭಕ್ತಿ ಗಾನಾಮೃತಂ. 9.30ಕ್ಕೆ ಮಹಾಪೂಜೆ, 10ರಿಂದ ಅನ್ನಸಂತ ರ್ಪಣೆ. 10.30ರಿಂದ ಮಾವಿನಕಟ್ಟೆ ಶ್ರೀ ಅಯ್ಯಪ್ಪ ಸ್ವಾಮೀ ಯಕ್ಷಗಾನ ಕಲಾಸಂಘ ಮಾವಿನಕಟ್ಟೆ ಮತ್ತು ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯೊಂ ದಿಗೆ ವೀರಮಣಿ ಲವಕುಶ ಯಕ್ಷಗಾನ ಬಯಲಾಟ ನಡೆಯಲಿದೆ. 22ರಂದು ಪ್ರಾತಃಕಾಲ ಶರಣಂ ವಿಳಿ, ದೀಪೋ ದ್ವಾಸನದೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗಲಿದೆ.

Leave a Reply

Your email address will not be published. Required fields are marked *

You cannot copy content of this page