ಮುಂಡಿಗೆ ವನದಲ್ಲಿ ಕುಂಟಿಕಾನ ಧೂಮಾವತಿ ದೈವದ ನೇಮ

ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಕ್ಷೇತ್ರಕ್ಕೆ ಸಂಬಂಧಪಟ್ಟ ಮುಂಡಿಗೆ ವನದಲ್ಲಿ ಕುಂಟಿಕಾನ ಧೂಮಾವತೀ ದೈವಕ್ಕೆ ಪುದ್ವಾರು ಮೆಚ್ಚಿನ ನೇಮ ನಿನ್ನೆ ನಡೆಯಿತು. ರಾತ್ರಿ ಕುಂಟಿಕಾನ ಮಠದಲ್ಲಿ ಶ್ರೀ ದೇವರಿಗೆ ಕಾರ್ತಿಕ ಪೂಜೆ, ಅನ್ನ ಸಂತರ್ಪಣೆ ನಡೆಯಿತು.

ಇಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಕ್ಷೇತ್ರದ ಬಡಗುಬಾಗಿಲಿನಲ್ಲಿ ರಾಜ್ಯ ದೈವದ ನೇಮ, ರಾತ್ರಿ ಕಾರ್ತಿಕ ಪೂಜೆ ನಡೆಯಲಿದೆ. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಇರ್ವೆರ್ ಉಳ್ಳಾಕುಲು, ಕುಂಟಿಕಾನ ಧೂಮಾವತಿ ದೈವಗಳ ನೇಮ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page