ಮುಷ್ಠಿಯುದ್ಧ ಸ್ಪರ್ಧೆಯಲ್ಲಿ ಸೋತ ದ್ವೇಷದಿಂದ ಯುವಕನಿಗೆ ಇರಿತ

ಕಾಸರಗೋಡು: ಮುಷ್ಠಿಯುದ್ಧ ಸ್ಪರ್ಧೆ ಯಲ್ಲಿ ಸೋತ ದ್ವೇಷದಿಂದ ಯುವಕನ ಮೇಲೆ ಹಲ್ಲೆ ನಡೆಸಿ ಇರಿದು ಗಾಯ ಗೊಳಿಸಿದ ಘಟನೆ ನಗರದಲ್ಲಿ ನಡೆದಿದೆ. ಈ ಬಗ್ಗೆ ತಳಂಗರೆ ನಿವಾಸಿಯಾಗಿರುವ 19ರ ಹರೆಯದ ಯುವಕ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ದೂರು ನೀಡಿದ ಯುವಕ ನಗರದ ಜಿಮ್ನೇಶಿಯಂ ಒಂದರಲ್ಲಿ ಜುಲೈ ೧೫ರಂದು ರಾತ್ರಿ ಇನ್ನೋರ್ವನೊಂದಿಗೆ ಮುಷ್ಠಿಯುದ್ಧ ಸ್ಪರ್ಧೆಯಲ್ಲಿ ಏರ್ಪಟ್ಟಿದ್ದನು. ಅದರಲ್ಲಿ ಆ ಯುವಕ ಗೆದ್ದಿದ್ದನು. ಆ ದ್ವೇಷದಿಂದ ಸೋತ ಯುವಕ ತನ್ನ ಮೇಲೆ ಹಲ್ಲೆ ನಡೆಸಿರುವುದನ್ನು ಪೊಲೀಸರಿಗೆ ನೀಡಿದ ದೂರಿನಲ್ಲಿ ಗೆದ್ದ ಯುವಕ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

You cannot copy content of this page