ಮೂರು ತಿಂಗಳ ಗರ್ಭಿಣಿ ಯುವತಿ ನೇಣು ಬಿಗಿದು ಸಾವು: ಪತಿ ಬಂಧನ

ಕುಂಬಳೆ:  ಮೂರು ತಿಂಗಳ ಗರ್ಭಿಣಿಯಾದ ಯುವತಿ ನೇಣು ಬಿಗಿದು ಸಾವಿಗೀಡಾದ ಘಟನೆಗೆ ಸಂಬಂಧಿಸಿ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.  ಕಯ್ಯಾರು ಕನ್ನಟ್ಟಿಪಾರೆ ಶಾಂತಿಯೋಡು ನಿವಾಸಿ  ಜನಾರ್ದನ (39) ಎಂಬಾತನನ್ನು ಕುಂಬಳೆ ಎಸ್‌ಐ ವಿ.ಕೆ. ವಿಜಯನ್ ನೇತೃತ್ವದ ಲ್ಲಿ ಬಂಧಿಸಲಾಗಿದೆ. ಜನಾರ್ದನನ ಪತ್ನಿ ಮಂಗಳೂರಿನ ವಾಮಂಜೂರು ಪಿಲಿಕುಳ ನಿವಾಸಿಯಾದ ವಿಜೇತ (32) ಕಳೆದ ಅಗೋಸ್ತ್ 18ರಂದು ಮನೆಯೊಳಗೆ ಫ್ಯಾನ್‌ಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ವಿಜೇತ  ಆತ್ಮಹತ್ಯೆ ಕುರಿತು ಬರೆದಿಟ್ಟಿದ್ದ  ಪತ್ರ ಪತ್ತೆಯಾಗಿತ್ತು.  ಮೂರು ತಿಂಗಳ ಗರ್ಭಿಣಿಯಾದ ತನಗೆ ಪತಿ ನಿರಂತರ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾ ನೆಂದು ಪತ್ರದಲ್ಲಿ ತಿಳಿಸಲಾಗಿತ್ತು.

ಈ ಪತ್ರವನ್ನು ಕಸ್ಟಡಿಗೆ ತೆಗೆದುಕೊಂಡ ಪೊಲೀಸರು ಆ ಬಗ್ಗೆ ಸಮಗ್ರ ತನಿಖೆ ನಡೆಸಿದ್ದರು.  ತನಿಖೆಯಲ್ಲಿ ವಿಜೇತರ ಸಾವಿಗೆ ಕಾರಣ ಜನಾರ್ದನನ ಕಿರುಕುಳವಾಗಿದೆಯೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಜನಾರ್ದನನನ್ನು ನಿನ್ನೆ ಕುಂಬಳೆ ಠಾಣೆಗೆ ಕರೆಸಿ ಬಂಧಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ.  ಜನಾರ್ದನ ಹಾಗೂ ವಿಜೇತರ ವಿವಾಹ ಒಂದೂವರೆ ವರ್ಷಗಳ ಹಿಂದೆಯಷ್ಟೇ ನಡೆದಿತ್ತು.

Leave a Reply

Your email address will not be published. Required fields are marked *

You cannot copy content of this page