ಯುವ ಭಾರತಿ ಸೇವಾ ಸಮಿತಿಯ ನೂತನ ಮನೆ ಗೃಹಪ್ರವೇಶ, ಭಜನಾ ಸತ್ಸಂಗ

ಉಪ್ಪಳ: ಯುವಭಾರತಿ ಸೇವಾ ಸಮಿತಿ ಉಪ್ಪಳ ಇದರ ವತಿಯಿಂದ ಬಾಯಿಕಟ್ಟೆಯಲ್ಲಿ ಸೇವಾ ರೂಪದಲ್ಲಿ ನಿರ್ಮಿಸಲಾದ 3ನೇ ಮನೆ “ಯುವಭಾರತಿ”ಯ ಗೃಹಪ್ರವೇಶ, ಮನೆ ಭಜನೆ, ಧಾರ್ಮಿಕ ಸತ್ಸಂಗ ಕಾರ್ಯಕ್ರಮ ನಡೆಯಿತು. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಆಶೀರ್ವಚನ ನೀಡಿದರು. ಯುವಭಾರತಿಯ ಗೌರವ ಅಧ್ಯಕ್ಷ ಹರಿನಾಥ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ವಿಠಲ್ ಭಂಡಾರಿ ಮುಳಿಂಜ ಪತ್ನಿ ಸಂಧ್ಯಾ ಉಪಸ್ಥಿತರಿದ್ದರು. ಧಾರ್ಮಿಕ ಮುಂದಾಳು ವಿಜಯ ಪಂಡಿತ್, ರಾಷ್ಟ್ರೀಯ ಸ್ವಯಂಸೇವಕ ಸಂಘ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸುಕುಮಾರ್ ಬಾಯಾರು. ವಾಸ್ತು ತಜ್ಞ ಸುನಿಲ್ ವೈಶಾಖ್, ಯುವಭಾರತಿ ಅಧ್ಯಕ್ಷ ಪುರುಷೋತ್ತಮ ಮುಟ್ಟಂ ಉಪಸ್ಥಿತರಿದ್ದರು. ಇದೇ ಸಂದರ್ಭ ದಲ್ಲಿ ನೂತನ ಮನೆಯಲ್ಲಿ ಮನೆ ಭಜನೆ ನಡೆಯಿತು. ಭಜನಾ ಸೇವೆ ಯನ್ನು ಶ್ರೀಕ್ರೃಷ್ಣ ಭಜನಾ ಸಂಘ ಕ್ರೃಷ್ಣನಗರ ಮಂಗಲ್ಪಾಡಿ ಇವರು ನಡೆಸಿಕೊಟ್ಟರು.
ಭಜನೆಯಲ್ಲಿ ಪೂಜಿತಗೊಂಡ ಭಾವಚಿತ್ರ, ಭಗವದ್ಗೀತೆ, ತಾಳ, ಫಲವಸ್ತು, ಹಣ್ಣುಕಾಯಿಯನ್ನು ಮನೆ ಯವರಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ವಿಠಲ್ ಭಂಡಾರಿಯವರು ಕೊಂಡೆವೂರು ಶ್ರೀಗಳಿಗೆ ಸಾಹಿತ್ಯವನ್ನು ಕಾಣಿಕೆಯಾಗಿ ನೀಡಿದರು. ಸುದರ್ಶನ್ ವಂದಿಸಿ ದರು. ಜಗದೀಶ ಪ್ರತಾಪನಗರ ನಿರೂಪಿಸಿದರು ಯುವಭಾರತಿ ಸಂಸ್ಥೆಯ ಕಾರ್ಯದರ್ಶಿ ಅಶೋಕ್ ಬಂದ್ಯೋಡು ಸ್ವಾಗತಿಸಿದರು.

Leave a Reply

Your email address will not be published. Required fields are marked *

You cannot copy content of this page