ರಸ್ತೆಗೆ ವಾಲಿ ನಿಂತ ಮರಗಳು ಬಂಬ್ರಾಣದಿಂದ ಕಟ್ಟತ್ತಡ್ಕ ವರೆಗೆ ಅಪಾಯ ಭೀತಿ

ಕುಂಬಳೆ: ಆರಿಕ್ಕಾಡಿ-ಕಳತ್ತೂರು ರಸ್ತೆಯಲ್ಲಿ ಬಂಬ್ರಾಣದಿಂದ ಕಟ್ಟತ್ತಡ್ಕವರೆಗೆ ಬೃಹತ್ ಮರಗಳು ರಸ್ತೆಯತ್ತ ವಾಲಿ ನಿಂತಿರುವುದು ಅಪಾಯಭೀತಿಗೆ ಕಾರಣವಾಗಿದೆ. ಈ ಮರಗಳನ್ನು ಕಡಿದು ತೆಗೆಯ ಬೇಕೆಂದು ವಾಹನ ಚಾಲಕರು ಹಾಗೂ ಮಾಲಕರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಹಲವು ಬಾರಿ  ಆಗ್ರಹಪಟ್ಟರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲವೆಂದು ಚಾಲಕರು ಆರೋಪಿಸುತ್ತಿದ್ದಾರೆ.

ಇದೇ ವೇಳೆ ಇತ್ತೀಚೆಗೆ ಸಂಚರಿ ಸುತ್ತಿದ್ದ ಆಟೋ ರಿಕ್ಷಾವೊಂದರ ಮೇಲೆ ಬಂಬ್ರಾಣದಲ್ಲಿ ಮರವೊಂದು ಬಿದ್ದಿದೆ. ಇಬ್ರಾಹಿಂ ಕೊಡ್ಯಮ್ಮೆ ಎಂಬವರ ಆಟೋ ರಿಕ್ಷಾದ ಮೇಲೆ ಬಿದ್ದ ಮರ ವಿದ್ಯುತ್ ತಂತಿಗೆ ತಾಗಿ  ನಿಂತಿರುವುದರಿಂದ ಭಾರೀ ಅಪಾಯ ತಪ್ಪಿಹೋಗಿದೆ. ಇದರಿಂದಾಗಿ ಗಂಟೆಗಳ ಕಾಲ ಆ ಪ್ರದೇಶದಲ್ಲಿ ವಿದ್ಯುತ್ ವಿತರಣೆ ಮೊಟಕುಗೊಂಡಿ ತು. ಅಪಾಯಭೀತಿ ಹುಟ್ಟಿಸುವ ಮರಗಳನ್ನು ಕಡಿದು ತೆಗೆಯುವ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಿರ್ಲಕ್ಷ ವಿರುದ್ಧ ತೀವ್ರ ಚಳವಳಿ ನಡೆಸುವುದಾಗಿ ವಾಹನ ಚಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page