ಸರ್ವೀಸ್ ರಸ್ತೆಯ ಹೊಂಡಕ್ಕೆ ಬೈಕ್ ಬಿದ್ದು ಸವಾರ ಮೃತ್ಯು

ಹೊಸದುರ್ಗ: ಸರ್ವೀಸ್ ರಸ್ತೆಯಲ್ಲಿರುವ ಹೊಂಡಕ್ಕೆ ಬೈಕ್ ಬಿದ್ದು ಯುವಕ ಮೃತಪಟ್ಟ ಘಟನೆ ಸಂಭವಿಸಿದೆ. ತಳಿಪರಂಬ ಆಲಿಂಕೀಲ್ ಥಿಯೇಟರ್ ಸಮೀಪ ವಾಸಿಸುವ ಕುಂಞಿಮಂಗಲ ಆಂಡಾಕೋವ್ವಲ್ ಅಂಚೆ ಕಚೇರಿ ಬಳಿಯ ರಿಯಾಸ್(34) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಕಣ್ಣೂರು ಪಿಲಾತ್ತರ ವಳಯಾಂಕೋಡ್ ಎಂಜಿಎಂ ಕಾಲೇಜಿಗೆ ತೆರಳುವ ಜಂಕ್ಷನ್‌ನಲ್ಲಿ ತಳಿಪರಂಬ ಭಾಗಕ್ಕಿರುವ ಸರ್ವೀಸ್ ರಸ್ತೆಯಲ್ಲಿ ನಿನ್ನೆ ರಾತ್ರಿ ರಾತ್ರಿ  ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಅಂಗವಾಗಿ ಸರ್ವೀಸ್ ರಸ್ತೆಯಲ್ಲಿ ಸೃಷ್ಟಿಸಿದ ಹೊಂಡಕ್ಕೆಬೈಕ್ ಬಿದ್ದಿದೆ. ಅಪಘಾತ ನಡೆದ ಅರ್ಧ ಗಂಟೆ ಬಳಿಕವೇ ವಿಷಯ  ನಾಗರಿಕರ ಗಮನಕ್ಕೆ ಬಂದಿದೆ. ಕೂಡಲೇ ರಿಯಾ ಸ್‌ರನ್ನು ಹೊಂಡದಿಂದ ಮೇಲಕ್ಕಿತ್ತಿದ್ದಾರೆ. ಅಷ್ಟರೊಳಗಾಗಿ ಅವರು ಮೃತಪಟ್ಟಿದ್ದರು. ರಿಯಸ್ ಎಡಾಟ್‌ನಲ್ಲಿ ಬಾಳೆಕಾಯಿ ಮಾರಾಟ ನಡೆಸುವ ಕೇಂದ್ರದ ಡೆಲಿವರಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Leave a Reply

Your email address will not be published. Required fields are marked *

You cannot copy content of this page