ಸೋಂಕಾಲ್ನಲ್ಲಿ ಚರಂಡಿ ಸ್ಲ್ಯಾಬ್ ಕುಸಿದು ಅಪಾಯಕ್ಕೆ ಆಹ್ವಾನ
ಉಪ್ಪಳ: ಚರಂಡಿಗೆ ಹಾಕಿದ್ದ ಸ್ಲ್ಯಾಬ್ ಮುರಿದು ಬಿದ್ದು ಸ್ಥಳೀಯರ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಕೈಕಂಬ-ಬಾಯಾರು ರಸ್ತೆಯ ಸೋಂಕಾಲು ಪೇಟೆಯ ಬಸ್ ನಿಲ್ದಾಣ ಬಳಿಯಲ್ಲೇ ಚರಂಡಿಯ ಸ್ಲ್ಯಾಬ್ ಕುಸಿದಿದ್ದು, ಅಪಾಯ ಆಹ್ವಾನಿಸುತ್ತಿದೆ. ಒಂದು ವಾರದ ಹಿಂದೆ ಭಾರೀ ವಾಹನವೊಂದು ಸ್ಲ್ಯಾಬ್ನ ಮೇಲೆ ಸಂಚರಿಸಿದ್ದು, ಇದರಿಂದಾಗಿ ಸ್ಲ್ಯಾಬ್ ಕುಸಿಯಲು ಕಾರಣವೆಂದು ಸ್ಥಳೀಯರು ತಿಳಿಸಿ ದ್ದಾರೆ. ಮಕ್ಕಳ ಸಹಿತ ಪ್ರಯಾಣಿಕರು ಬಸ್ ತಂಗುದಾಣಕ್ಕೆ ಈ ಭಾಗದಿಂ ದಲೇ ತೆರಳುತ್ತಿದ್ದು, ಈ ವೇಳೆ ಹೊಂ ಡಕ್ಕೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಪರಿಸರದ ಬೀದಿ ದೀಪ ಕೆಟ್ಟು ಹೋಗಿದ್ದು, ಕತ್ತಲಿಗೆ ಇಲ್ಲಿ ಸಂಚರಿಸುವಾಗ ಸ್ಲ್ಯಾಬ್ಗೆ ಕಾಲು ಬೀಳಲು ಸಾಧ್ಯತೆ ಇದೆ. ಕೆಲವರು ದ್ವಿಚಕ್ರ, ತ್ರಿಚಕ್ರ ವಾಹನಗಳು ಕೆಲವೊಮ್ಮೆ ಚರಂಡಿ ಸ್ಲ್ಯಾಬ್ನಲ್ಲಿ ಸಂಚರಿಸುತ್ತಿದ್ದು, ಹೊಂಡಕ್ಕೆ ಬಿದ್ದು ಅಪಘಾತ ಸೃಷ್ಟಿಗೂ ಕಾರಣವಾಗ ಲಿದೆ. ಈ ಹಿನ್ನೆಲೆಯಲ್ಲಿ ಚರಂ ಡಿಯ ಸ್ಲ್ಯಾಬ್ನ್ನು ಶೀಘ್ರ ಸರಿಪ ಡಿಸಿ ಭೀತಿ ದೂರಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.