ಸ್ಥಳ ನಾಮಫಲಕ ವಿವಾದ: ಅಡ್ಕ ವೀರನಗರದಲ್ಲಿ ಸಂಘರ್ಷಾವಸ್ಥೆ ; 200 ಮಂದಿ ವಿರುದ್ಧ ಕೇಸು

ಕುಂಬಳೆ: ಬಂದ್ಯೋಡು ಅಡ್ಕ ವೀರನಗರದಲ್ಲಿ ಸ್ಥಳ ನಾಮಫಲಕ ಸ್ಥಾಪನೆ ವಿಷಯದಲ್ಲಿ ಎರಡು ತಂಡಗಳ ಮಧ್ಯೆ ತರ್ಕ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 7 ಗಂಟೆ ವೇಳೆ ಎರಡು ತಂಡಗಳಿಗೆ ಸೇರಿದವರು ಸ್ಥಳದಲ್ಲಿ ಗುಂಪು ಸೇರಿದ್ದು, ಇದರಿಂದ ಸಂಘರ್ಷಾವಸ್ಥೆ ಸೃಷ್ಟಿಯಾಗಿತ್ತು. ವಿಷಯ ತಿಳಿದು ಅಲ್ಲಿಗೆ ತಕ್ಷಣ ತಲುಪಿದ ಕುಂಬಳೆ ಪೊಲೀಸರು ಎರಡೂ ತಂಡಗಳನ್ನು ಬಲಪ್ರಯೋಗಿಸಿ ಚದುರಿಸಿದ್ದಾರೆ. ಸ್ಥಳದಲ್ಲಿ ಗುಂಪು ಸೇರಿ ಸಂಘರ್ಷಾವಸ್ಥೆ ಸೃಷ್ಟಿಸಲೆತ್ನಿಸಿದ ಆರೋಪದಂತೆ  ಇನ್ಸ್‌ಪೆಕ್ಟರ್ ಕೆ.ವಿ. ವಿನೋದ್ ಕುಮಾರ್ ನೀಡಿದ ದೂರಿನಂತೆ ಎರಡೂ ತಂಡಗಳಿಗೆ ಸೇರಿದ 200 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.  ವರ್ಷಗಳ ಹಿಂದೆಯೇ ಈ ಪ್ರದೇಶದಲ್ಲಿ ಸ್ಥಳನಾಮಫಲಕ ಸ್ಥಾಪನೆ ವಿಷಯದಲ್ಲಿ ಎರಡು ತಂಡಗಳ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. ಈ ಹಿಂದೆ ವಿ.ವಿ. ಮನೋಜ್ ಕುಂಬಳೆ ಇನ್ಸ್‌ಪೆಕ್ಟರ್ ಆಗಿದ್ದ ಸಂದರ್ಭದಲ್ಲಿ ಸ್ಥಳದ ನಾಮಫಲಕ ಹೆಸರಿನಲ್ಲಿ ವಿವಾದ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ಎಲ್ಲಾ ನಾಮಫಲಕಗಳನ್ನೂ ಪೊಲೀಸರು ತೆರವುಗೊಳಿಸಿದ್ದರು.

Leave a Reply

Your email address will not be published. Required fields are marked *

You cannot copy content of this page